ನವದೆಹಲಿ/ಬೆಂಗಳೂರು: ಈಗಾಗಲೇ ಕಾಳಿಮಾತೆ ವಿಚಾರವಾಗಿ ದೇಶದಲ್ಲಿ ಪ್ರತಿಭಟನೆ, ಕಾನೂನು ಹೋರಾಟ ಎದ್ದಿರುವ ಸಂದರ್ಭದಲ್ಲಿ, ಬೆಂಕಿಗೆ ತುಪ್ಪ ಸುರಿವಂತೆ ಹೊಸ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದಾರೆ ಮಹುವಾ ಮೊಯಿತ್ರಾ ಎಂಬ ಪಶ್ಚಿಮ ಬಂಗಾಳದ ಸಂಸದೆ.
'ನನಗೆ ಕಾಳಿ ಮಾತೆಯು ಮಾಂಸ ತಿನ್ನುವ, ಮದ್ಯ ಸ್ವೀಕರಿಸುವ ದೇವತೆಯಾಗಿದ್ದಾಳೆ ಎಂದು ಹೇಳಿದ್ದಾರೆ. ನಿಮ್ಮ ದೇವತೆ ಬಗ್ಗೆ ಊಹಿಸಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ. ಕೆಲ ಸ್ಥಳಗಳಲ್ಲಿ ದೇವರಿಗೆ ವಿಸ್ಕಿ ಅರ್ಪಿಸಲಾಗುತ್ತದೆ, ಮತ್ತೆ ಕೆಲವೆಡೆ ಅದನ್ನು ದೇವದೂಷಣೆ ಎಂದು ಕರೆಯಲಾಗುತ್ತದೆ’ ಎಂದು ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ.
ಕಾರ್ಯಕ್ರಮವೊಮದರಲ್ಲಿ ಮಾತನಾಡಿರುವ ಅವರು, ಕಾಳಿ ಸಿಗರೇಟ್ ಸೇದುತ್ತಿರುವ ರೀತಿ ಸಿನಿಮಾ ಪೋಸ್ಟರ್ ತಯಾರಿಸಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ್ಧಾರೆ. ‘ನೀವು ಸಿಕ್ಕಿಂಗೆ ಹೋದರೆ ಅಲ್ಲಿ ಕಾಳಿ ಮಾತೆಗೆ ವಿಸ್ಕಿ ಅರ್ಪಿಸುವುದನ್ನು ನೋಡಬಹುದು. ನೀವು ಉತ್ತರ ಪ್ರದೇಶಕ್ಕೆ ಹೋಗಿ ಕಾಳಿ ಮಾತೆಗೆ ವಿಸ್ಕಿಯನ್ನು ಪ್ರಸಾದವಾಗಿ ಅರ್ಪಿಸುತ್ತೇವೆ ಎಂದು ಹೇಳಿದರೆ, ಅವರು ಅದನ್ನು ದೇವದೂಷಣೆ ಎಂದು ಪರಿಗಣಿಸುತ್ತಾರೆ’ ಎಂದು ಮೊಯಿತ್ರಾ ಹೇಳಿದ್ದಾರೆ.
ನಟಿ, ನಿರ್ದೇಶಕಿ, ಕವಯತ್ರಿ ಲೀನಾ ಮಣಿಮೇಕಲೈ ‘ಕಾಳಿ‘ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಸಂಬ0ಧಿಸಿದ ಪೋಸ್ಟರ್ ಹಂಚಿಕೊ0ಡಿದ್ದು ಅದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯು ಸಿಗರೇಟ್ ಸೇದುತ್ತಿರುವ ಹಾಗೂ ಕೈಯಲ್ಲಿ ಎಲ್ಜಿಬಿಟಿಕ್ಯೂ ಸಮುದಾಯದ ಧ್ವಜವನ್ನು ಹಿಡಿದಿರುವ ಅವತಾರದಲ್ಲಿ ತೋರಿಸಲಾಗಿದೆ. ಅದರಲ್ಲಿ ಏನು ತಪ್ಪಿದೆ ಎಂಬುದು ಇವರ ವಾದ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪೋಸ್ಟರ್ನಲ್ಲಿ ಹಿಂದೂ ದೇವತೆಗೆ ಅಪಮಾನ ಮಾಡಲಾಗಿದ್ದು, ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಟೀಕಿಸಿದ್ದಾರೆ.
Varthajala daily, Bengaluru/Newdelhi

0 Comments