ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ಹಾಗೂ ಶ್ರೀ ರಾಮಚಂದ್ರ ಸ್ವಾಮಿ ದೇವಸ್ಥಾನ, ಶ್ರೀರಾಮಪುರ ಇವುಗಳ ಸಂಯುಕ್ತಾಶ್ರಯದಲ್ಲಿ ಜುಲೈ 19 ರಿಂದ 22 ರ ವರೆಗೆ ಪ್ರತಿದಿನ ಸಂಜೆ 6 ರಿಂದ 8 ಗಂಟೆಯವರೆಗೆ ಧಾರ್ಮಿಕ/ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಿದ್ದು ಅವುಗಳ ವಿವರಗಳು ಈ ರೀತಿ ಇವೆ :
ಜುಲೈ 19, ಮಂಗಳವಾರ ಸಂಜೆ 6 ಗಂಟೆಗೆ-ಬಸವೇಶ್ವರನಗರದ ಅಲಕನಂದ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ ಶ್ರೀ ಅಬ್ಬೂರು ಬದರಿ ಆಚಾರ್ ಅವರಿಂದ "ಸಂಗ್ರಹ ರಾಮಾಯಣ" ಪ್ರವಚನ.
ಜುಲೈ 20, ಬುಧವಾರ ಸಂಜೆ 6 ಗಂಟೆಗೆ-ನಾಗರಬಾವಿಯ ಶ್ರೀ ಭಾರತಿ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, 7 ಗಂಟೆಗೆ-ಶ್ರೀ ಅಬ್ಬೂರು ಬದರಿ ಆಚಾರ್ ಅವರಿಂದ "ಸಂಗ್ರಹ ರಾಮಾಯಣ" ಪ್ರವಚನ.
ಜುಲೈ 21, ಗುರುವಾರ ಸಂಜೆ 6 ಗಂಟೆಗೆ-ಲಗ್ಗೆರೆಯ ಸಂಸ್ಕೃತಿ ವಿಪ್ರಸ್ತ್ರೀ ಸಂಘದ ಸದಸ್ಯರಿಂದ ಭಜನೆ, 7 ಗಂಟೆಗೆ ಶ್ರೀ ಅಬ್ಬೂರು ಬದರಿ ಆಚಾರ್ ಅವರಿಂದ "ಸಂಗ್ರಹ ರಾಮಾಯಣ" ಪ್ರವಚನ.
ಜುಲೈ 22, ಶುಕ್ರವಾರ ಸಂಜೆ 6-30ಕ್ಕೆ, ಜಹಗೀರ್ದಾರ್ ಸಹೋದರಿಯರಾದ ಕು|| ದ್ಯುತಿ ಮತ್ತು ಕು|| ಸ್ನಿಗ್ಧ ಇವರಿಂದ "ಹರಿನಾಮ ಸಂಕೀರ್ತನೆ". ವಾದ್ಯ ಸಹಕಾರ : ಶ್ರೀ ಜಿ. ಆರ್ ದುಶ್ಯಂತ್ (ಕೀ-ಬೋರ್ಡ್) ಶ್ರೀ ಪ್ರಮೋದ್ ಗಬ್ಬೂರ್ (ತಬಲಾ).
-------------------------------
ಕಾರ್ಯಕ್ರಮ ನಡೆಯುವ ಸ್ಥಳ :
ಶ್ರೀ ರಾಮಚಂದ್ರ ಸ್ವಾಮಿ ದೇವಸ್ಥಾನ,
ಶ್ರೀರಾಮಪುರಂ
ಬೆಂಗಳೂರು-560021
-------------------------------
ಸರ್ವರಿಗೂ ಆದರದ ಸುಸ್ವಾಗತ

0 Comments