ಬಳ್ಳಾರಿ ಜೂನ್ 12. ವಿವಿಎಸ್ ಟ್ರಸ್ಟ್ ಮತ್ತು ಎಸ್ಪಿವೈಎಸ್ಎಸ್ ಸಂಸ್ಥೆಯಿಂದ ಬಳ್ಳಾರಿ ನಗರದಲ್ಲಿರುವ ನಗರೇಶ್ವರ ಸ್ವಾಮಿ ದೇವಸ್ಥಾನದ ಅವರಣದಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಜೂನ್ 12 ರಂದು ಭಾನುವಾರ ಬೆಳಗಿನ ಜಾವ ಸರಿಯಾಗಿ ಐದು ಮೂವತ್ತಕ್ಕೆ ಯೋಗ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ಇದು ಸತತವಾಗಿ 45 ದಿನಗಳ ಕಾಲ ಕಾರ್ಯಕ್ರಮ ಇರುತ್ತದೆ ಎಂದು, ಎಲ್ಲರೂ ತಪ್ಪದೇ ಭಾಗವಹಿಸಬೇಕೆಂದು, ಈ ಕಾರ್ಯಕ್ರಮಕ್ಕೆ ಯಾರಾದರೂ ಬರಬಹುದು ಕುಲ ಮತಭೇದವಿಲ್ಲದೆ ಭಾಗಿಯಾಗೋಣ ಎಲ್ಲರ ಆರೋಗ್ಯವನ್ನು ಕಾಪಾಡಿಕೊಳ್ಳೋಣ ಎಂದು ಕಲ್ಲೂರು ವೆಂಕಟೇಶಲು ಶ್ರೇಷ್ಠಿ ತಿಳಿಸಿದರು.ಇನ್ನೂ ಹೆಚ್ಚಿನ ಮಾಹಿತಿಗಾಗಿ 8277249823 ಈ ಫೋನ್ ನಂಬರನ್ನು ಸಂಪರ್ಕಿಸಲು ಮನವಿಮಾಡಿದ್ದಾರೆ.

0 Comments