Ticker

6/recent/ticker-posts

Ad Code

Responsive Advertisement

ಮಕ್ಕಳು ವಿದ್ಯಾರ್ಜನೆ ಜೊತೆಗೆ ಲೌಕಿಕ ಜ್ಞಾನ ಪಡೆದು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಮುಂದಾಗಬೇಕು-ರವಿ ಚೆಳ್ಳಗುರ್ಕಿ

ಬಳ್ಳಾರಿ ಜೂನ್ 17. ಮಕ್ಕಳ ಕಳ್ಳಸಾಗಾಣಿಕೆ,ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅಪಹರಣ, ಭಿಕ್ಷಾಟನೆ,ದುಡಿಮೆ ಮುಂತಾದವು ಕಾನೂನಾತ್ಮಕವಾಗಿ ಅಪರಾಧ ಜೊತೆಗೆ ಮನುಕುಲಕ್ಕೆ ಮಾಡಿದ ಅಪಮಾನ ಎಂದು ಶಾಲೆಯ ಮುಖ್ಯಗುರುಗಳು ಹಾಗೂ ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ರವಿಚೇಳ್ಳಗುರ್ಕಿ ಅಭಿಪ್ರಾಯ ಪಟ್ಟರು. ತಾಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ಸ್ನೇಹಿ ಗ್ರಾಮ ಪಂಚಾಯಿತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮಕ್ಕಳು ವಿದ್ಯಾರ್ಜನೆ ಜೊತೆಗೆ ಲೌಕಿಕ ಜ್ಞಾನ ಪಡೆದು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಚೈತನ್ಯ ಬೆಳಸಿ ಕೊಳ್ಳಬೇಕೆಂದರು.


  ಈ ಕಾರ್ಯಕ್ರಮಕ್ಕೆ ಎಸ್.ಡಿ.ಎಂ.ಸಿ ಅಧ್ಯಕ್ಷ ದೊಡ್ಡ ಕುಮಾರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ವಿ.ಹನುಮಂತಪ್ಪ, ಪಿ.ಡಿ.ಒ ವೀರೇಶ  ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.ಸಂಪನ್ಮೂಲ ಶಿಕ್ಷಕ ವಿ.ಬಸವರಾಜ, ಗ್ರಾಮ ಪಂಚಾಯಿತಿ ಸದಸ್ಯರಾದ ಉಮೇಶ ಗೌಡ, ಭರತ್, ಗ್ರಂಥ ಪಾಲಕ ಸಿದ್ದಪ್ಪ, ಬಾಷ,ಶಿಕ್ಷಕರಾದ ಮೋದಿನ್ ಸಾಬ್, ವಿದ್ಯಾರ್ಥಿ ಪ್ರತಿನಿಧಿ ಸುಂಕಮ್ಮ ಮುಂತಾದವರು ಉಪಸ್ಥಿತರಿದ್ದರು.


 

Post a Comment

0 Comments

Ad Code

Responsive Advertisement