ಬಳ್ಳಾರಿ ಜೂನ್ 24. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಶಾಸಕ ಎಂ.ಎಸ್ ಸೋಮಲಿಂಗಪ್ಪನವರು ನೈತೃತ್ವದಲ್ಲಿ ಸಿರುಗುಪ್ಪ ತಾಲೂಕಿನ ಈಶಾನ್ಯ ಭಾಗದಲ್ಲಿರುವ ಅತಿದೊಡ್ಡ ಗ್ರಾಮ ಪಂಚಾಯಿತಿಯಾದ ಹಚ್ಚೊಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಚುನಾವಣೆಯಲ್ಲಿ ಬಿ.ಜೆ.ಪಿ ಪಕ್ಷ ಬೆಂಬಲಿತ ಅಭ್ಯರ್ಥಿಯಾದ ಚಿಕ್ಕಬಳ್ಳಾರಿ ಗ್ರಾಮದ ಗಂಗಮ್ಮ ಗಂಡ ಮಲ್ಲೇಶ ಪರಿಶಿಷ್ಟ ಜಾತಿ ಆಧ್ಯಕ್ಷ ಸ್ಥಾನಕ್ಕೆ ಒಟ್ಟು 26 ಸದಸ್ಯರ ಪೈಕಿ 16 ಸದಸ್ಯರ ಮತ ಪಡೆದು ಜಯಶೀಲರಾದರು. ಈ ಸಂದರ್ಭದಲ್ಲಿ ಹಿರಿಯರಾದ ಮುಖಂಡರಾದ ದಮ್ಮೂರು ಸೋಮಪ್ಪ, ಶರಣ ಬಸವನಗೌಡ ಹಚ್ಚೊಳ್ಳಿ,ಸಣ್ಣ ಮುದಿಯಪ್ಪ ಚಿಕ್ಕ ಬಳ್ಳಾರಿ, ಎಂ.ಎಸ್.ಸಿದ್ದಪ್ಪ, ಸಣ್ಣ ದ್ಯಾವಣ್ಣ ಚಿಕ್ಕಬಳ್ಳಾರಿ, ಶಿವರಾಮಗೌಡ ಹಚ್ಚೊಳ್ಳಿ,ಶಿವಶಂಕರಗೌಡ ಹಚ್ಚೊಳ್ಳಿ,ರಾಮಕ್ರಿಷ್ಣ, ದೇವೇಂದ್ರಗೌಡ ಹೊನ್ನಳ್ಳಿ, ಅಂಜಿರಾಜು ಹೊನ್ನರಹಳ್ಳಿ,ಚಿಕ್ಕಬಳ್ಳಾರಿ ಪಂಪಣ್ಣ,ಮಾಟೂರು ಲಿಂಗಪ್ಪ, ನರಿ ಭೀಮಣ್ಣ ಮಾಟೂರು, ಸಿಂಗ್ರಿ ಮುದುಕಪ್ಪ ,ಚಿಕ್ಕಬಳ್ಳಾರಿ ಮುದಿಯಪ್ಪ,ಮುಂತಾದವರು ಭಾಗಿಯಾಗಿದ್ದರು.

0 Comments