‘ಸ್ಲೇಟು-ಬಳಪ ಫೌಂಡೇಶನ್ ನ ಅದ್ಯಕ್ಷೆ ಭಾರ್ಗವಿ ಹೇಮಂತ್ ಅವರ ನೇತೃತ್ವದಲ್ಲಿ 19-06-2022ರಂದು ಅನೇಕಲ್ ತಾಲ್ಲೂಕಿನ ತಟ್ಟನಹಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಪಾಠೋಪಕರಣ ಮತ್ತು ಬಿಸ್ಕತ್ ಗಳನ್ನು ನೀಡಿತಲ್ಲದೆ, ಶಾಲೆಯ ಅತಿಥಿ ಇಂಗ್ಲಿಷ್ ಉಪಾಧ್ಯಾಯರಿಗೆ ಒಂದು ವರ್ಷಗಳ ಕಾಲ ಪ್ರತಿ ತಿಂಗಳಿಗೆ 2 ಸಾವಿರ ನೀಡುವುದಾಗಿ ತಿಳಿಸಿದರು.
ರೇಖಿಗುರು ಮೈಥಲಿ ವರದರಾಜನ್ ಅವರು ಶಾಲೆಯ ಮಕ್ಕಳಿಗೆ ಸ್ಪರ್ದೆ ಏರ್ಪಡಿಸಿದರೆ ಅದರ ಖರ್ಚ್ ನ್ನು ಭರಿಸುವುದಾಗಿ ಪ್ರಕಟಿಸಿದರು. ಕನ್ನಡ ಚಿಂತಕ ರಾ.ನಂ. ಚಂದ್ರಶೇಖರ ಅವರು ಶಾಲೆಯಲ್ಲಿ ಗ್ರಂಥಾಲಯ ಆರಂಭಿಸಿದರೆ ನವೆಂಬರ್ ತಿಂಗಳಲ್ಲಿ 500 ಪುಸ್ತಕಗಳನ್ನು ನೀಡುವುದಾಗಿ ಭರವಸೆ ನೀಡಿದರು. ಶಾಲೆಯ ಅಬಿವೃದ್ಧಿ ಮಂಡಲಿ ಅಧ್ಯಕ್ಷ ಕೃಷ್ಣಾ ರೆಡ್ಡಿ ಮುಂಥಾದವರಿದ್ದರು. ಈ ಕಾರ್ಯಕ್ರಮದ ಫೋಟೋ ಅಡಕದಲ್ಲಿದೆ. ದಯವಿಟ್ಟು ಪ್ರಕಟಿಸಲು ಬಿನ್ನಹ
ಭಾರ್ಗವಿ ಹೇಮಂತ್
ಅದ್ಯಕ್ಷೆ

0 Comments