Ticker

6/recent/ticker-posts

Ad Code

Responsive Advertisement

ಸಾರ್ವಜನಿಕರ ತಿಳುವಳಿಕೆಗಾಗಿ

ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯವನ್ನು ಒದಗಿಸುವ ಡಾ.ಜಸ್ಟೀಸ್ ಕೆ. ಭಕ್ತವತ್ಸಲ ರವರ ವಿಚಾರಣಾ ಆಯೋಗ

ಸರ್ಕಾರದ ಆದೇಶ ಸಂಖ್ಯೆ: ಹಿಂವಕ 114 ಬಿಸಿಎ 2022, ಬೆಂಗಳೂರು,  ದಿನಾಂಕ:07.05.2022 ರ ಆದೇಶದಲ್ಲಿ  ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯವನ್ನು ಒದಗಿಸಲು ಸಮರ್ಪಿತವಾದ ವಿಚಾರಣಾ ಆಯೋಗವನ್ನು ನೇಮಿಸಲಾಗಿರುತ್ತದೆ.

ಸರ್ಕಾರದ ಆದೇಶ ಸಂಖ್ಯೆ: ಹಿಂವಕ 114 ಬಿಸಿಎ 2022, ಬೆಂಗಳೂರು,  ದಿನಾಂಕ:13.05.2022 ರ ಆದೇಶದಲ್ಲಿ ವಿಚಾರಣಾ ವರದಿಯನ್ನು ಮೂರು ತಿಂಗಳೊಳಗೆ ಸರ್ಕಾರಕ್ಕೆ ಸಲ್ಲಿಸಲು ತಿಳಿಸಲಾಗಿರುತ್ತದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕರು / ಜನಪ್ರತಿನಿಧಿಗಳು ಲಿಖಿತ ರೂಪದಲ್ಲಿ ತಮ್ಮ ಅಹವಾಲುಗಳನ್ನು ಆಯೋಗದ ಕಾರ್ಯದರ್ಶಿಗಳ ವಿಳಾಸಕ್ಕೆ ದಿನಾಂಕ:08.06.2022 ರ ಸಾಯಂಕಾಲ 05.00 ಗಂಟೆಯೊಳಗಾಗಿ ಸಲ್ಲಿಸುವುದು. ತದನಂತರ ಬಂದ ಅಹವಾಲುಗಳನ್ನು  ಪರಿಗಣಿಸಲಾಗುವುದಿಲ್ಲ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ , ಕಾರ್ಯದರ್ಶಿ, ಕರ್ನಾಟಕದ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯವನ್ನು ಒದಗಿಸುವ ಡಾ.ಜಸ್ಟೀಸ್ ಕೆ. ಭಕ್ತವತ್ಸಲ ರವರ ವಿಚಾರಣಾ ಆಯೋಗ

ಕೊಠಡಿ ಸಂ:133 & 134 ಮೊದಲನೇ ಮಹಡಿ ವಿಕಾಸ ಸೌಧ, ಡಾ|| ಅಂಬೇಡ್ಕರ್ ವೀಧಿ ಬೆಂಗಳೂರು -560001 ದೂ.ಸಂ.080-22352152, 22034004 ಸಂಪರ್ಕಿಸಬಹುದು


Post a Comment

0 Comments

Ad Code

Responsive Advertisement