ಬಳ್ಳಾರಿ ಮೇ 08. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲುಕಿನ ಶಾಸನವಾಸಪುರ ಗ್ರಾಮದಲ್ಲಿ ಭಾನುವಾರ ಮುಂಜಾನೆಯ 12 ಗಂಟೆ ಸಮಯದಲ್ಲಿ ಸುಮಾರು 1 ಎಕರೆಯ ಮೇಕ್ಕೆ ಜೋಳ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ಹತ್ತಿ ಕೊಂಡಿದೆ.
ವಿಷಯ ತಿಳಿದ ತಕ್ಷಣ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ತಹಶೀಲ್ದಾರ್ ಮತ್ತು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ನಜೀರ್ ಆಮ್ಮದ ಜೊತೆ ಭೇಟಿ ನೀಡಿ ರೈತರಾದ ಚಂದ್ರಗೌಡನವರ ಹೊಲಕ್ಕೆ ಬೆಂಕಿಯಿಂದ ಹಾನಿಯಾದ ಕಾರಣ ಸರ್ಕಾರದಿಂದ ಪರಿಹಾರ ಕಲ್ಪಿಸಿ ಕೊಡುವುದಾಗಿ ತಿಳಿಸಲಾಯಿತು.

0 Comments