ಬಳ್ಳಾರಿ ಮೇ 26. ಸಮರ್ಥನಂ ಅಂಗವಿಕಲರ ಸಂಸ್ಥೆಯು "ರಜತ ಮಹೋತ್ಸವ"ದ ನೆನಪಿಗಾಗಿ ಮತ್ತು "ಅಂತರಾಷ್ಟ್ರೀಯ ವಿಕಲಾಂಗ ವ್ಯಕ್ತಿಗಳ ದಿನ"ದ ಅಂಗವಾಗಿ ವಿಕಲಚೇತನರಿಗಾಗಿ ಬೃಹತ್ಉದ್ಯೋಗ ಮೇಳವನ್ನು ಆಯೋಜಿಸಲು ನಿರ್ದರಿಸಿದ್ದೇವೆ. ಇದರಿಂದ ಸುಮಾರು 300ಕ್ಕೂ ಹೆಚ್ಚು ಉದ್ಯೋಗಾರ್ಥಿಗಳಿಗೆ ಉದ್ಯೋಗವನ್ನು ಒದಗಿಸುವಂತಹ ಅವಕಾಶ ಸಿಗುತ್ತದೆ. ಈ ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹಲವಾರು ವಿಕಲಚೇತನ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಈ ಉದ್ಯೋಗ ಮೇಳದ ಉದ್ದೇಶವಾಗಿದೆ. ಈ ಮೇಳದಲ್ಲಿ ವಿವಿದ ಶಿಕ್ಷಣ ಪಡೆದಂತಹ (10 ರಿಂದ ಸ್ನಾತಕೋತ್ತರ ಪದವಿ) ಸುಮಾರು 300ಕ್ಕೂ ಹೆಚ್ಚು ಅರ್ಹ ಉದ್ಯೋಗಾರ್ಥಿಗಳು ಹಾಗು 20ಕ್ಕೊ ಹೆಚ್ಚು ಉದ್ಯೋಗದಾತರ ಭಾಗವಹಿಸುವಿಕೆಯನ್ನು ನೀರಿಕ್ಷೀಸುತ್ತಿದ್ದೇವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಪತ್ರದ ಮುಖಾಂತರ ತಮ್ಮಲ್ಲಿ ಕೇಳಿಕೊಳ್ಳುವುದೇನೆಂದರೆ ಬಳ್ಳಾರಿ ನಗರದ ಗಾಂಧಿ ನಗರದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯು ವಿಕಲಚೇತನರಿಗಾಗಿ ಬೃಹತ್ ಉದ್ಯೋಗ ಮೇಳವನ್ನು ನಗರದ ಶ್ರೀ ಮೇಧಾ ಪಿ.ಯು. ಮತ್ತು ಪದವಿ ಕಾಲೇಜು ನಂ:03 ಕೋಟೆಯ ಮುಖ್ಯ ರಸ್ತೆ. ಮೋತಿ ಸರ್ಕಲ್ ಹತ್ತಿರ ಬಳ್ಳಾರಿ. ದಿನಾಂಕ 31.05.2022 ರಂದು ರಂದು ಹಮ್ಮಿಕೋಳ್ಳಲಿದ್ದಾರೆ. ಈ ಉದ್ಯೋಗ ಮೇಳಕ್ಕೆ 20ಕ್ಕು ಹೆಚ್ಚು ಕಂಪನಿಗಳಿಂದ ಉದ್ಯೋಗದಾತರು ಆಗಮಿಸವುದರಿಂದ. ಈ ಉದ್ಯೋಗ ಮೇಳಕ್ಕೆ ವಯೂಮಿತಿ 21ಕ್ಕು ಮೆಲ್ಪಟ್ಟಿರಬೇಕು ಮತ್ತು ಶ್ಯೆಕ್ಷಣಿಕ ವಿದ್ಯಾರ್ಹತೆಯು ಎಸ್.ಎಸ್.ಎಲ್.ಸಿ, ಪದವಿ ಪೂರ್ವ ಮತ್ತು ಪದವಿ ಪಡೆದಿರುವಂತಹ ವಿಕಲಚೇತನ ಅಭ್ಯರ್ಥಿಗಳು ಅರ್ಹರಾಗಿರುತ್ತಾರೆ. ಆದಕಾರಣ ಎಲ್ಲಾ ಅರ್ಹ ವಿದ್ಯಾವಂತ ವಿಲಚೇತನ ಅಭ್ಯರ್ಥಿಗಳು ಈ ಉದ್ಯೋಗ ಮೇಳದ ಲಾಭವನ್ನು ಪಡೆದು ನಿಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೋಳ್ಳಬೆಕೆಂದು ಕಳಕಳಿಯಾಗಿ ವಿನಂತಿಸಿಕೊಂಡಿದ್ದಾರೆ.
.jpg)
0 Comments