Ticker

6/recent/ticker-posts

Ad Code

Responsive Advertisement

ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ರಾಜಕೀಯ ಪಕ್ಷಗಳ ಪಟ್ಟಿಯಿಂದ ತೆಗೆದು ಹಾಕಲು ನಿರ್ಧಾರ

ಬೆಂಗಳೂರು, ಮೇ 30 (ಕರ್ನಾಟಕ ವಾರ್ತೆ) :ಭಾರತೀಯ ಚುನಾವಣಾ ಆಯೋಗವು 25 ಮೇ 2022 ರವರೆಗೆ ಎಂಟು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳನ್ನು ರಾಜಕೀಯ ಪಕ್ಷಗಳ ಪಟ್ಟಿಯಿಂದ ತೆಗೆದುಹಾಕಲು ತೀರ್ಮಾನಿಸಿದೆ.

ಇಂಡಿಯನ್ ವೋಟರ್ಸ್ ವೆಲ್‍ಫೇರ್ ಪಾರ್ಟಿ, ಕರ್ನಾಟಕ ಕ್ರಾಂತಿ ದಳ, ನವ ನಿರ್ಮಾಣ ನಾಗರಿಕ ಸಮಿತಿ, ರಾಷ್ಟ್ರೀಯ ಜಲಾಂದೋಲನಾ ಪಕ್ಷ, ಸ್ವರ್ಣಯುಗ ಪಾರ್ಟಿ, ಟಿಪ್ಪು ಸುಲ್ತಾನ್ ನ್ಯಾಷನಲ್ ರಿಪಬ್ಲಿಕ್ ಪಾರ್ಟಿ, ಯುನೈಟೆಡ್ ಇಂಡಿಯನ್ ಡೆಮಾಕ್ರೆಟಿಕ್ ಕೌನ್ಸಿಲ್, ಯುಆರ್‍ಎಸ್ ಸಂಯುಕ್ತ ಪಕ್ಷ ಈ ಎಂಟು ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಆದೇಶದಿಂದ ಬಾಧಿತರಾಗಿದ್ದಲ್ಲಿ ಅಗತ್ಯ ದಾಖಲೆಗಳೊಂದಿಗೆ 30 ದಿನಗಳೊಳಗಾಗಿ ಮುಖ್ಯ ಚುನಾವಣಾ ಆಯೋಗ, ನವದೆಹಲಿ ಇವರುಗಳನ್ನು ಸಂಪರ್ಕಿಸುವುದು.

ಒಟ್ಟು 2796 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳ ಪೈಕಿ ಕರ್ನಾಟಕ ರಾಜ್ಯಕ್ಕೆ ಸೇರಿದ 93 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಪ್ರಜಾಪ್ರತಿನಿಧಿ ಕಾಯ್ದೆ 1951 ಸೆಕ್ಷನ್ 29ಸಿ ರನ್ವಯ ಸ್ವೀಕರಿಸಲಾದ ರಾಜಕೀಯ ವಂತಿಕೆಗಳು ನಮೂನೆ 24ಎ (ಪ್ರತಿ ವರ್ಷ ಸೆಪ್ಟೆಂಬರ್ 30 ರೊಳಗಾಗಿ) ಹಾಗೂ ಆಡಿಟ್ ವರದಿ (ಪ್ರತಿ ವರ್ಷ ಅಕ್ಟೋಬರ್ ತಿಂಗಳೊಳಗೆ) ಮತ್ತು ಚುನಾವಣಾ ವೆಚ್ಚದ ವಿವರಗಳನ್ನು (ವಿಧಾನಸಭೆ ಚುನಾವಣೆ ನಡೆದ 75 ದಿನಗಳೊಳಗಾಗಿ ಹಾಗೂ ಲೋಕಸಭಾ ಚುನಾವಣೆಗಳ ನಡೆದ 90 ದಿನಗಳೊಳಗಾಗಿ) 2017-18, 2018-19 ಮತ್ತು 2019-20 ಹಣಕಾಸು ವರ್ಷಗಳಲ್ಲಿ ನಿಗಧಿತ ಅವಧಿಯೊಳಗಾಗಿ ಸಲ್ಲಿಸದೆ ಇರುವ ವಿವರಗಳನ್ನು  CEO.KARNATAKA.GOV.IN   ರಲ್ಲಿ ಕಾಣಬಹುದು. ಸದರಿ 85 ನೋಂದಾಯಿತ ಮಾನ್ಯತೆ ಪಡೆಯದ ರಾಜಕೀಯ ಪಕ್ಷಗಳು ಪೂರಕ ದಾಖಲೆಗಳೊಂದಿಗೆ ಮುಖ್ಯ ಚುನಾವಣಾಧಿಕಾರಿ, ಕರ್ನಾಟಕ ನಿರ್ವಾಚನ ನಿಲಯ, ಶೇಷಾದ್ರಿ ರಸ್ತೆ, ಬೆಂಗಳೂರು – 560001 ಇವಿಗೆ ಸಲ್ಲಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.


Post a Comment

0 Comments

Ad Code

Responsive Advertisement