Ticker

6/recent/ticker-posts

Ad Code

Responsive Advertisement

Flash News: ಸಿದ್ದರಾಮಯ್ಯ 2023ಕ್ಕೆ ಕಾಂಗ್ರೆಸ್ನಲ್ಲಿ ಇರಲ್ಲ: ಸಚಿವ ಮುನಿರತ್ನ

ಬೆಂಗಳೂರು, ಮೇ.05: 2023ರ ಡಿಸೆಂಬರ್ನಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ನಲ್ಲಿ ಇರಲ್ಲ ಎಂದು ಸುದ್ದಿಗಾರರೊಡನೆ ಹೇಳಿದರು. 1994ರಲ್ಲಿ ರಾಮಕೃಷ್ಣ ಹೆಗ್ಡೆಯವರಿಗೆ ಯಾವ ಪರಿಸ್ಥಿತಿ ಬಂದಿತ್ತೊ ಅದೇ ಪರಿಸ್ಥತಿ ಸಿದ್ದರಾಮಯ್ಯಗೆ ಬರಲಿದೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ನಿ0ದ ಬಿಡಿಸೋದೆ ಮುಂದಿನ ಟಾರ್ಗೆಟ್ ಎಂದು ಭವಿಷ್ಯ ನುಡಿದರು. 2023ಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ಇರಲ್ಲ. ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಮಾಡಿಸಿರುವ ಸರ್ವೇ ಕಾಪಿ ನಮ್ಮ ಕೈಗೂ ಸೇರಿದೆ. ಅವರುಗಳಿಗೆ ಮಾತ್ರ ಅಲ್ಲ ಸರ್ವೇ ಮಾಡಿಸೋಕೆ ಗೊತ್ತಿರುವುದು. ಅಶ್ವತ್ಥ್ ನಾರಾಯಣ ಅವರ ಮೇಲೆ ಆರೋಪ ಮಾಡಿದಂತೆ ಅವರ ಸರ್ವೇ ಕೂಡ ನಮ್ಮ ಕೈ ಸೇರಿದೆ. ಸಿದ್ದರಾಮಯ್ಯ ಅವರನ್ನು ಯಾರು ಹೊರಗೆ ಹಾಕ್ತಾರೋ ಕಾದುನೋಡಿ ಎಂದರು.

ಕಾ0ಗ್ರೆಸ್ ಪಾರ್ಟಿ ಮುಳುಗಿ ಹೋಗಿರುವ ಹಡಗು. ಸಿದ್ದರಾಮಯ್ಯ ಅವರು ಇಷ್ಟೆಲ್ಲಾ ಮಾತಾಡ್ತಾರೆ. ಸಿದ್ದರಾಮಯ್ಯರನ್ನೇ 2023ರಲ್ಲಿ ಸಸ್ಪೆಂಡ್ ಮಾಡಿಸ್ತಾರೆ. ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ನಿ0ದ ಬಿಡಿಸೋದೆ ಮುಂದಿನ ಟಾರ್ಗೆಟ್. 1993ರಲ್ಲಿ ರಾಮಕೃಷ್ಣ ಹೆಗಡೆ ಅವರ ಜಾಗದಲ್ಲಿ ಈಗ ಸಿದ್ದರಾಮಯ್ಯ ಇದಾರೆ. 100% ಸಿದ್ದರಾಮಯ್ಯ 2023ಕ್ಕೆ ಕಾಂಗ್ರೆಸ್ನಲ್ಲಿ ಇರೋದಿಲ್ಲ. ನಮ್ಮ ಪಕ್ಷಕ್ಕೆ ಯಾರೆಲ್ಲಾ ಬರ್ತಾರೆ, ಅವರನ್ನು ಸೇರಿಸಿಕೊಳ್ಳುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಹೇಳಿದರು.

ಕಾಂಗ್ರೆಸ್ನವರು ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಇನ್ನು, ಪಿಎಸ್ಐ ನೇಮಕಾತಿ ಅಕ್ರಮ ವಿಚಾರದಲ್ಲಿ ಕಾಂಗ್ರೆಸ್ ಆರೋಪಕ್ಕೆ ಸಂಬ0ಧಿಸಿದ0ತೆ ಮಾತನಾಡಿದ ಅವರು, ಯಾವುದೇ ಅಧಾರ ಇಲ್ಲದೆ ಕಾಂಗ್ರೆಸ್ ನಾಯಕರು ಆರೋಪ ಮಾಡುತ್ತಿದ್ದಾರೆ. ಅದು ಕಾಂಗ್ರೆಸ್ ಪಕ್ಷದವರ ಹುಟ್ಟುಗುಣ, ಅನುಭವದ ಕೊರತೆ ಇರುವ ರಾಜಕಾರಣಿ ಆರೋಪ ಮಾಡಿದ್ರೆ ಅನುಭವದ ಕೊರತೆ ಎನ್ನಬಹುದು, ಆದರೆ ಕಾಂಗ್ರೆಸ್ನವರು ಅತೀ ಬುಧ್ಧಿವಂತರು. ಎಂಟು ಬಾರೀ ಬಜೆಟ್ ಮಂಡಿಸಿರುವ ರಾಜಕಾರಣಿ ದಾಖಲೆ ಇಲ್ಲದೆ ಆರೋಪ ಮಾಡಿದರೆ ಹೇಗೆ? ದಾಖಲೆ ಅಮೇಲೆ ಕೊಡ್ತಿನಿ ಎಂದು ಹೇಳಿ ಆರೋಪ ಮಾಡಿದ್ದಾರೆ, ಆಧಾರ ರಹಿತ ಆರೋಪ ಮಾಡುತ್ತದ್ದಾರೆ. ಇದು ಗಾಳಿಯಲ್ಲಿ ಗುಂಡು ಹೊಡೆಯುವ ರೀತಿ ಅಷ್ಟೇ ಎಂದು ಕಿಡಿಕಾರಿದರು.

ಅಶ್ವತ್ಥ್ ನಾರಾಯಣ ಅವರ ಮೇಲೆ ಆರೋಪ ಮಾಡ್ತಿದ್ದಾರೆ. ಯಾವುದೇ ಒಂದು ತನಿಖೆಯನ್ನು ಸಂಪೂರ್ಣವಾಗಿ ಮಾಡಬೇಕು ಎಂದು ಸರ್ಕಾರವೇ ಹೇಳಿದೆ. ಅವರಿಗೆ ಅಧಿಕಾರಕ್ಕೆ ಬರಲ್ಲ ಎಂದು ಚೆನ್ನಾಗಿ ಗೊತ್ತಿದೆ. ಮತ್ತೆ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುತ್ತೆ. ಕಾಂಗ್ರೆಸ್ ಈಗಾಗಲೇ ಸಾಕಷ್ಟು ಸರ್ವೇಗಳನ್ನು ಮಾಡಿದೆ. 120 ಸ್ಥಾನಗಳು ಬಿಜೆಪಿ ಬರುತ್ತೆ ಎನ್ನುವ ಮಾಹಿತಿ ಅವರಗೆ ಇದೆ. ಜನರಿಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೇವಲ ಊಹಾಪೋಹ ಹೇಳಿಕೆಯನ್ನು ಅವರು ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜನವರಿ 3ರಂದೇ ಅಶ್ವತ್ಥ್ ನಾರಾಯಣ ಅವರಿಗೆ ರಾಮನಗರದಲ್ಲಿ ಡಿಕೆ ಬ್ರರ‍್ಸ್ ಮುಹೂರ್ತ ಇಟ್ಟಿದ್ದರು. ಒಂದು ವರ್ಷದಲ್ಲೇ ಇವರು ಏನಾದ್ರೂ ಮಾಡ್ತಾರೆ ಅಂತಾ ನಾವು ಅವತ್ತೆ ಅನ್ಕೊಂಡಿದ್ವಿ. ಇದೆಲ್ಲ ರಾಮನಗರ ಎಫೆಕ್ಟ್. ಅವರ ವಿರುದ್ದವಾಗಿ ಯಾರಾದ್ರೂ ಏನಾದರೂ ಮಾತನಾಡಿದ್ರೆ ಅಲ್ಲಿಂದಲೇ ಶುರುವಾಗುತ್ತೆ. ದಾಖಲೆ ಇಲ್ಲ ಅಂದ್ರು ಏನಾದರೂ ಮಾಡ್ತಾರೆ. ಅವರುಗಳು ಮಿನಿ ರೌಡಿಗಳ ಹಾಗೆ ವರ್ತಿಸುತ್ತಿದ್ದಾರೆ. ಅವರುಗಳ ಆಟ ನಮ್ಮ ಹತ್ತಿರ ನಡೆಯೊಲ್ಲ ಎಂದು ಹೇಳಿದರು.

Varthajala daily, Malleshwaram, Bengaluru

Post a Comment

0 Comments

Ad Code

Responsive Advertisement