ಬಳ್ಳಾರಿ ಮೇ 10. ತಾಲೂಕಿನ ರೂಪನಗುಡಿಯ 800 ವರ್ಷಗಳ ಇತಿಹಾಸ ಉಳ್ಳ ಶ್ರೀ ಲಕ್ಷ್ಮಿ ವೆಂಕಟರಮಣ ದೇವಸ್ಥಾನ ನವೀಕರಣಗೊಂಡಿದೆ ಎಂದು, ದಿನಾಂಕ 14/05/22 ರಂದು ಶ್ರೀ ಲಕ್ಷ್ಮಿ ವೆಂಕಟರಮಣ ಕಲ್ಯಾಣೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಬುಡಾ ಅಧ್ಯಕ್ಷರು ಹಾಗು ಬಳ್ಳಾರಿ ಜಿಲ್ಲಾ ರೆಡ್ಡಿ ಜನಸಂಘದ ಅಧ್ಯಕ್ಷರಾದ ನಾರಾ ಪ್ರತಾಪ್ ರೆಡ್ಡಿಯವರು ಮತ್ತು ಶ್ರೀಮತಿ ನಾರಾ ಶೈಲಜಾ ರೆಡ್ಡಿಯವರು ನಮ್ಮ ಪ್ರತಿನಿಧಿಯೊಂದಿಗೆ ತಿಳಿಸಿದ್ದಾರೆ.
ಆದ ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಲ್ಯಾಣೋತ್ಸವವನ್ನು ಯಶಸ್ವಿಗೊಳಿಸಬೇಕೆಂದು ಕೋರಿದ್ದಾರೆ. ಮದ್ಯಾಹ್ನ 12 ಗಂಟೆಯಿಂದ ಪ್ರಸಾದ ಕಾರ್ಯಕ್ರಮ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

0 Comments