Ticker

6/recent/ticker-posts

Ad Code

Responsive Advertisement

ಅಕ್ಷಯ ಕೃಷ್ಣಮೂರ್ತಿ ರವರ ಭಾವಪೂರ್ಣ ಗೀತ ನಮನ

 ಕಳೆದ ಮಾರ್ಚ್ 5ನೇ ತಾರೀಖಿನಂದು ನಮ್ಮೆಲ್ಲರ ಆತ್ಮೀಯರು ಹಾಗೂ ಜಾಂಬವ ಜಾಗೃತಿ ವೇದಿಕೆ ಮುಖಾಂತರ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಬಹು ದೊಡ್ಡ ಕನಸನ್ನು ಕಂಡಿದ್ದ ಅಕ್ಷಯ ಕೃಷ್ಣಮೂರ್ತಿ ರವರ ಅಗಲಿಕೆ ಒಂದು ದೊಡ್ಡ ಆಘಾತವಾಗಿದ್ದು , ಅಗಲಿದ ಚೇತನಕ್ಕೆ ಅಕ್ಷಯ ಕೃಷ್ಣಮೂರ್ತಿ ಆತ್ಮೀಯ ಬಳಗ ಮತ್ತು ಜಾಂಬವ ಜಾಗೃತಿ ವೇದಿಕೆ  ಸಂಯುಕ್ತಾಶ್ರಯದಲ್ಲಿ ಏಪ್ರಿಲ್ ತಿಂಗಳ 9ನೇ ತಾರೀಖಿನ ಶನಿವಾರ ಸಂಜೆ 5ಗಂಟೆಗೆ ಯಿಂದ 8 ಗಂಟೆಗೆ ವರೆಗೂ  ಬೆಂಗಳೂರಿನ ನಯನ ಸಭಾಂಗಣದಲ್ಲಿ (ರವೀಂದ್ರ ಕಲಾಕ್ಷೇತ್ರ ಪಕ್ಕ ಜೆ ಸಿ ರಸ್ತೆ)  ಅಕ್ಷಯ ಕೃಷ್ಣಮೂರ್ತಿ ರವರ ಭಾವಪೂರ್ಣ ಗೀತ ನಮನ , ನುಡಿ ನಮನ ಸಲ್ಲಿಸುವ ನಿಟ್ಟಿನಲ್ಲಿ ನಮ್ಮ ಸಮುದಾಯದ ಹೆಮ್ಮೆಯ ಗಾಯಕರಾದ ಸಂತವಾಣಿ ಪಿ ಸುಧಾಕರ್ ಮತ್ತು ತಂಡದವರಿಂದ ಗೀತ ಗಾಯನ ಕಾರ್ಯಕ್ರಮ ಮತ್ತು ನಮ್ಮೆಲ್ಲರ ಮೆಚ್ಚಿನ ರಾಜ್ಯಸಭಾ ಸದಸ್ಯರಾದ ಎಲ್. ಹನುಮಂತಯ್ಯ ಸರ್ , ಮಾಜಿ ಸಚಿವರು ವಿಧಾನಸಭಾ ಸದಸ್ಯರಾದ ಆರ್ ಬಿ ತಿಮ್ಮಪೂರ್ ಸೇರಿದಂತೆ ಹಲವಾರು ಗಣ್ಯರು, ಮುಖಂಡರು, ಅಧಿಕಾರಿಗಳು, ಸಂಘಟನೆಗಳ ಮುಖಂಡರು,  ಗೆಳೆಯರು ಸೇರಿದಂತೆ   ಅಕ್ಷಯ ಕೃಷ್ಣಮೂರ್ತಿ ಸರ್ ಕುಟುಂಬಸ್ಥರಿಂದ ನುಡಿ ನಮನ ಸಲ್ಲಿಸುವ ಮೂಲಕ ಭಾವಪೂರ್ಣ ನಮನಗಳು ಅರ್ಪಿಸಲು ನಿರ್ಧರಿಸಲಾಗಿದೆ.


 ಈ ನಮನ ಕಾರ್ಯಕ್ರಮದಲ್ಲಿ ನೀವು ಮತ್ತು ನಿಮ್ಮ ಕುಟುಂಬದ ಸದಸ್ಯರು ತಪ್ಪದೇ ಹಾಜಾರಿರಬೇಕೆಂದು ವಿನಂತಿ. 


Post a Comment

0 Comments

Ad Code

Responsive Advertisement