ಶ್ರೀ ಸಮೀರ ಸಮಯ ಸಂಜೀವಿನಿ ಸಂಸತ್ ಸಭಾದ 22ನೇ ವರ್ಷದ ಹನುಮ ಜಯಂತಿ ಮಹೋತ್ಸವದ ಪ್ರಯುಕ್ತ ಬೆಂಗಳೂರಿನ ಮಲ್ಲೇಶ್ವರದ ಈಸ್ಟ್ ಪಾರ್ಕ್ ರಸ್ತೆಯಲ್ಲಿರುವ ಶ್ರೀರಾಮ ಮಂದಿರದಲ್ಲಿ ಏಪ್ರಿಲ್ 16ರಂದು ಏರ್ಪಡಿಸಲಾಗಿತ್ತು.
ಸಂಗೀತ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀ ಅಭಿಲಾಶ್ ಗಿರಿಪ್ರಸಾದ್ ಚೆನ್ನೈ ಅವರು ಹಾಡುಗಾರಿಕೆ ಆಯೋಜಿಸಿತ್ತು. ಇವರಿಗೆ ವಾದ್ಯ ಸಹಕಾರದಲ್ಲಿ, ವಿದ್ವಾನ್ ಶ್ರೀ ಎಸ್ ಶೇಷಗಿರಿರಾವ್ (ಪಿಟೀಲು), ವಿದ್ವಾನ್ ಶ್ರೀ ಹರಿನಾರಾಯಣ (ಮೃದಂಗ), ವಿದ್ವಾನ್ ಶ್ರೀ ಫಣೀಂದ್ರ (ಘಟಂ) ನಲ್ಲಿ ಸಾಥ್ ನೀಡಿದರು.
ವಿದುಷಿ ಶ್ರೀಮತಿ ವಾರುಣಿ ಜಯತೀರ್ಥಾಚಾರ್ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ವಾನ್ ಶ್ರೀ ಕಟ್ಟೆ ಸತ್ಯನಾರಾಯಣ ಅವರು ಕಲಾವಿದರ ಪರಿಚಯ ಮಾಡಿಕೊಟ್ಟರು. ವಿದ್ವಾನ್ ಶ್ರೀ ಚಿಂತನಪಲ್ಲಿ ಶ್ರೀನಿವಾಸ್, ಸಂಸ್ಥೆಯ ಮುಖ್ಯಸ್ಥರಾದ ಶ್ರೀ ವೇದವ್ಯಾಸಾಚಾರ್ ಹಾಗೂ ಸಂಗೀತಾಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

0 Comments