ಬೆ0ಗಳೂರು, ಮಾ.23: ಭಾರತವು 400 ಶತಕೋಟಿ ರೂಪಾಯಿ ಮೌಲ್ಯದ ಸರಕು ರಫ್ತು ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಿರುವುದಕ್ಕೆ ರೈತರು, ನೇಕಾರರು, ಸಣ್ಣ, ಅತಿ ಸಣ್ಣ, ಮಧ್ಯಮ ಉದ್ಯಮಗಳು, ತಯಾರಕರು, ರಫ್ತುದಾರರನ್ನು ಪ್ರಧಾನಮಂತ್ರಿ ಅಭಿನಂದಿಸಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರೈತರು, ನೇಕಾರರು, ಎಂಎಸ್ಎ0ಇಗಳು, ತಯಾರಕರು, ರಫ್ತುದಾರರನ್ನು ಶ್ಲಾಘಿಸಿದ್ದಾರೆ. ಏಕೆಂದರೆ ಭಾರತವು ನಿಗದಿತ ಸಮಯಕ್ಕಿಂತ 9 ದಿನಗಳ ಮುಂಚಿತವಾಗಿ 400 ಶತಕೋಟಿ ರೂಪಾಯಿ ಮೌಲ್ಯದ ಸರಕು ರಫ್ತು ಮಾಡುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಾಧಿಸಿದೆ. ಈ ಕುರಿತು ತಮ್ಮ ಟಿಟರ್ ಖಾತೆಯಲ್ಲಿ ಮನದಾಳದ ಅನಿಸಿಕೆಯನ್ನು ಹಂಚಿಕೊ0ಡಿದ್ದಾರೆ. ಇದು ನಮ್ಮ ಆತ್ಮನಿರ್ಭರ ಭಾರತ ಪಯಣದಲ್ಲಿ ಪ್ರಮುಖ ಮೈಲಿಗಲ್ಲು. #ಲೋಕಲ್ ಗೋಸ್ ಗ್ಲೋಬಲ್" ಎಂದಿದ್ದಾರೆ.
Varthajala, Daily, Bengaluru

0 Comments