Ticker

6/recent/ticker-posts

Ad Code

Responsive Advertisement

Breaking News: ಕಾನೂನು ತನ್ನ ಕೆಲಸ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ: ಚರಂಜಿತ್ ಸಿಂಗ್ ಚನ್ನಿ

ಜಲಂಧರ್, ಫೆ. 04: ಅಕ್ರಮ ಮರಳು ಗಣಿಗಾರಿಕೆ ಆರೋಪದಡಿ ಇಡಿಯಿಂದ ಬಂಧಿತರಾಗಿರುವ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರ ಸೋದರಳಿಯ ಬೂಪಿಂದರ್ ಸಿಂಗ್ ಅವರನ್ನು ಜಲಂಧರ್‌ನ ನ್ಯಾಯಾಂಗ ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಫೆಬ್ರವರಿ ೮ ರವರೆಗೆ ಇಡಿ ಕಸ್ಟಡಿಗೆ ನೀಡಲಾಗಿದೆ.

ದಿನವಿಡೀ ವಿಚಾರಣೆ ನಡೆಸಿದ ನಂತರ ಗುರುವಾರ ತಡರಾತ್ರಿ ಮಧು ಅವರನ್ನು ಇಡಿ ಬಂಧಿಸಿದೆ.

ಅವರನ್ನು ಫೆಬ್ರವರಿ ೮ ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಬೂಪಿಂದರ್ ಸಿಂಗ್ ಅವರ ವಕೀಲ ಹರ್ನೀತ್ ಸಿಂಗ್ ಒಬೆರಾಯ್ ಹೇಳಿದ್ದಾರೆ.

ಮೊನ್ನೆ ಶುಕ್ರವಾರ, ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಲ್ಲಿ ಬೂಪಿಂದರ್ ಸಿಂಗ್ ಬಂಧನಕ್ಕೊಳಗಾದ ನಂತರ, ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಚನ್ನಿ ಅವರು ಕಾನೂನು ತನ್ನ ಕೆಲಸವನ್ನು ಮಾಡುವುದಕ್ಕೆ ಯಾವುದೇ ವಿರೋಧವಿಲ್ಲ ಎಂದು ಹೇಳಿದರು. ಕಾನೂನು ತನ್ನ ಕೆಲಸ ಮಾಡುವುದಕ್ಕೆ ನಮ್ಮ ಅಭ್ಯಂತರವಿಲ್ಲ ಎಂದು ಬೂಪಿಂದರ್ ಸಿಂಗ್ ಬಂಧನ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಚನ್ನಿ ಅವರನ್ನು ಕೇಳಿದಾಗ ಹೇಳಿದರು.

Varthajala Daily, Bengaluru

Contact for advertisements 9448119247


 

Post a Comment

0 Comments

Ad Code

Responsive Advertisement