ದೊಡ್ಡ ಗಣಪತಿ ದೇವಸ್ಥಾನ, ಕಾರಂಜಿ ಆಂಜನೇಯ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ, ಮಿಂಟೋ ಆಂಜನೇಯ ದೇವಸ್ಥಾನ, ಈ ದೇವಸ್ಥಾನಗಳಿಗೆ ಪರಿಸರ ಇಲಾಖೆಯು ಪೊಲೀಸರ ಮೂಲಕ ಗಂಟೆಯ ನಾದ, ಧ್ವನಿವರ್ಧಕಗಳನ್ನು ಹಾಕಬಾರದೆಂದು ಆದೇಶಿಸಿತ್ತು, ಇದನ್ನು ಸಚಿವರ ಗಮನಕ್ಕೆ ತಂದ ನಂತರ ವಿಧಾನಸಭೆಯ ಸದನದಲ್ಲಿ ಬಸವನಗುಡಿಯ ಶಾಸಕರಾದಂತಹ ಶ್ರೀ ರವಿ ಸುಬ್ರಮಣ್ಯಮ್ ಅವರು ಧ್ವನಿ ಎತ್ತಿ ಸರ್ಕಾರದ ಮೂಲಕ ಆದೇಶವನ್ನು ಹಿಂಪಡೆಯುವಂತೆ ಮಾಡಿದ್ದಕ್ಕಾಗಿ ದೊಡ್ಡ ಗಣಪತಿ ದೇವಸ್ಥಾನದ ಅರ್ಚಕರು ಗಳಿಂದ, ಕನ್ನಡ ತಿಂಡಿ ಕೇಂದ್ರದ ರಾಮಚಂದ್ರ ರವರು ಮತ್ತು ಶ್ರೀಹರಿ, ಅಶೋಕ್ ಅಯ್ಯರ್, ಮಾಯಣ್ಣ, ಸತೀಶ್ ಉರಾಳ್ ಇವರುಗಳಿಂದ ಶ್ರೀ ರವಿಸುಬ್ರಹ್ಮಣ್ಯ ಅವರಿಗೆ ಅಭಿನಂದಿಸಿ ಸನ್ಮಾನಿಸಲಾಯಿತು.
0 Comments