ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇಲ್ಲ: ಕುಮಾರಸ್ವಾಮಿ
ರಾಮನಗರ, ಫೆ 20: ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇಲ್ಲ. ಅವರದ್ದು 70 ಸೀಟ್ ಅಷ್ಟೇ. ಅದರ ಮೇಲೆ ಕಾಂಗ್ರೆಸ್ ಹೋಗಲ್ಲ. ಹೀಗಾಗಿ ಜೆಡಿಎಸ್ ಶಾಸಕರ ಬ್ರೈನ್ ವಾಷ್ ಮಾಡುತ್ತಿದ್ದಾರೆ ಕಾಂಗ್ರೆಸ್ ನಾಯಕರು. ನಮಗೂ ರಾಜಕೀಯ ಗೊತ್ತಿದೆ. ನನಗೆ ಯಾವ ಶಾಕ್ ಇಲ್ಲ, ಯಾರು ಯಾರು ಹೋಗ್ತಾರೆಂದು ನನಗೆ ಗೊತ್ತು. ಇವರ ಹಣೆಬರಹ ಗೊತ್ತಿದೆ, ಯಾರು ಯಾರು ಡಬಲ್ ಗೇಮ್ ಆಡ್ತಿದ್ದಾರೆಂದು ಗೊತ್ತು. ಎಲ್ಲಕ್ಕೂ ಕಾಲ ಕೂಡಿ ಬರುತ್ತದೆ. ನಮ್ಮದು ರೈತರು ಕಟ್ಟಿರುವ ಪಕ್ಷ. ನಾವು ಯಾವ ಆಪರೇಷನ್ ಅನ್ನು ಮಾಡಲ್ಲ, ಅದರ ಅವಶ್ಯಕತೆ ಇಲ್ಲ ಎಂದು ಅವರು ಹೇಳಿದರು.
0 Comments