ರಾಮನಗರ, ಜ 08: ಕನಕಪುರದ ತಮ್ಮ ನಿವಾಸದಲ್ಲಿ ನಡದೆ ಸಭೆಯ ಬಳಿಕ ಡಿ ಕೆ ಶಿ ಸುಧ್ದಿಗಾರರೊಂದಿಗೆ ಮಾತನ್ನಾಡುತ್ತ ರಾಜ್ಯ ಸರಕಾರವು ಸುಪ್ರೀಂಕೋರ್ಟ್ನ ಆದೇಶದನ್ವಯ ಕರ್ಫ್ಯೂ ಜಾರಿ ಮಾಡಿಲ್ಲ, ಇದು ಬಿಜೆಪಿ ಕರ್ಫ್ಯೂ.
ನಮ್ಮ ಪಾದಯಾತ್ರೆ ನಿಲ್ಲಿಸಲು ಸರಕಾರ ತೀರ್ಮಾನ ಕೈಗೊಂಡಿದೆ. ನಾವು ಕೋವಿಡ್ ನಿಯಮದಂತೆ ಪಾದಯಾತ್ರೆ ಮಾಡುತ್ತೇವೆ. ನಮ್ಮ ಹಕ್ಕು, ನಮ್ಮ ಜಲ. ನಮ್ಮ ಜೊತೆ ೧೦೦ ವೈದ್ಯರು ಇರುತ್ತಾರೆ. ಬರುವಂತ ಕಾರ್ಯಕರ್ತರಿಗೆ ಕೋವಿಡ್ ನಿಯಮಗಳ ಬಗ್ಗೆ ತಿಳಿಸಲಾಗಿದೆ, ಮಾರ್ಗಸೂಚಿಯನ್ವಯ ನಾವು ನಡದೆಕೊಳ್ಳುತ್ತೇವೆ. ನಮ್ಮ ಪಾದಯಾತ್ರೆಯನ್ನು ಇಡೀ ರಾಜ್ಯ ಬೆಂಬಲ ಸೂಚಿಸಿದೆ. ರಾಜ್ಯದ ರೈತರ ಹಾಗು ಜನರ ಪರವಾಗಿ ಪಾದಯಾತ್ರೆ. ರಾಜ್ಯ ರೈತರ ಹಿತಕ್ಕಾಗಿ ಹೋರಾಟ. ಬಿಜೆಪಿ ಸರಕಾರ ಎರಡು ವರ್ಷದಿಂದ ಸರಕಾರ ನಡೆಸುತ್ತಿದೆ, ಯಾಕೆ ಇದನ್ನು ಜಾರಿ ಮಾಡಲಿಲ್ಲ. ರಾಜ್ಯದ್ಯಾಂತ ನಮಗೆ ಸಂಪೂರ್ಣ ಬೆಂಬೆಲ ಸಿಗುತ್ತಿರುವಾಗ ಬಿಜೆಪಿ ಅಡ್ಡಗಾಲು ಹಾಕುತ್ತಿದೆ. ರೈತರ ಹಾಗು ರಾಜ್ಯದ ಜನರಿಗಾಗಿ ಪಕ್ಷಾತೀತವಾಗಿ ಹೋರಾಟ ಮಡುತ್ತಿದ್ದೇವೆ.
Varthajala Daily, Bengaluru
0 Comments