ಬೆಂಗಳೂರು: ಜ26 ರಂದು 73ನೇ ಗಣರಾಜ್ಯೋತ್ಸವ ದಿನದ ಅಂಗವಾಗಿ ದಿ,ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥ ಮಾದಕ ವಸ್ತುಗಳ ಜಾಗೃತಿಗಾಗಿ “ ಮಾದಕ ವಸ್ತುಗಳನ್ನ ಬೇಡ ಎನ್ನಿರಿ” ಎನ್ನುವ ಘೋಷವಾಕ್ಯದಡಿಯಲ್ಲಿ ಬೆಂಗಳೂರು ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಡಾ,ಮೋಹನ್ ಕುಮಾರ್ ದಾನಪ್ಪನವರು ವಿಧಾನ ಸೌಧ ದಿಂದ ಪುನೀತ್ ರಾಜ್ ಕುಮಾರ್ ಸ್ಮಾರಕದವರೆಗೂ 21 ಕಿಲೋ ಮೀಟರ್ ಮ್ಯಾರಾಥಾನ್ ಓಟವನ್ನು ಪೂರ್ಣಗೊಳಿಸುವ ಮೂಲಕ ಜಾಗೃತಿ ಮೂಡಿಸಿದರು,
ವಿಧಾನ ಸೌಧದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಜಾಗೃತಿ ಓಟ ಪ್ರಾರಂಭಿಸಿ, ಕೆ.ಆರ್.ವೃತ್ತ, ಕಾರ್ಪೋರೆಷನ್ ವೃತ್ತ, ಕೆ.ಆರ್.ಮಾರ್ಕೆಟ್,ಕೆಂಗೇರಿ,ನಾಗರಭಾವಿ, ಗೋಪಾಲನ್ ಮಾಲ್, ಮೈಸೂರು ರೋಡ್,ಮಾರ್ಗದ ಮುಖಾಂತರ ಪುನೀತ್ ಸ್ಮಾರಕ ತಲುಪಿ ಪುನೀತ್ ಸಮಾಧಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ ನಂತರ ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದ0ತೆ ವ್ಯಾಪಕವಾಗಿರುವ ಡ್ರಗ್ಸ್ ದೇಹಕ್ಕೆ ಮತ್ತು ಆರೋಗ್ಯಕ್ಕೆ ಮಾರಕ, ದೇಶವನ್ನೆ ಡ್ರಗ್ಸ್ ನಿಂದ ನಿರ್ಮೂಲನೆ ಮಾಡಬೇಕೇಂದು ಹೇಳುವುದಕ್ಕಿಂತ ತಮ್ಮ ತಮ್ಮ ಕುಟುಂಬದ ಸದಸ್ಯರ ಮೇಲೆ ನಿಗಾವಹಿಸಿ ಮಾದಕ ವಸ್ತುಗಳಿಗೆ ಬಲಿಯಾಗದಂತೆ ನಿಗಾವಹಿಸಲು ಡಾ,ಮೋಹನ್ ಕುಮಾರ್ ದಾನಪ್ಪನವರು ಮನವಿ ಮಾಡಿದರು
ಮೋಹನ್ ಕುಮಾರ್ ದಾನಪ್ಪ
ಕೇಂದ್ರ ಸರ್ಕಾರಿ ವಕೀಲರು
ಕರ್ನಾಟಕ ಉಚ್ಚ ನ್ಯಾಯಾಲಯ-ಬೆಂಗಳೂರು
ದೂರವಾಣಿ:- 9449491133
0 Comments