ಬೆಂಗಳೂರು, ಡಿ 30: ಕನ್ನಡ ಬಾವುಡ ಸುಟ್ಟು, ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹಾನಿ ಮಾಡಿದ “ಎಮ್ ಇ ಎಸ್ ಸಂಘಟನೆ” ನಿಷೇಧಕ್ಕೆ ಆಗ್ರಹಿಸಿ ನಾಳೆ ಡಿ.೩೧ರಂದು ಕರೆ ನೀಡಲಾಗಿದ್ದ ಕರ್ನಾಟಕ ಬಂದ್ ಅನ್ನು ವಾಟಾಳ್ ನಾಗರಾಜ್ ಹಿಂಪಡೆದಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.
ಸಿಎಂ ಬಸವರಾಜ್ ಬೊಮ್ಮಾಯಿ ಮನವೊಲಿಕೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್, ನಾಳೆ ನಡೆಯಬೇಕಾಗಿದ್ದ ಬಂದ್ ಇರಲ್ಲ ಎಂದು ತಿಳಿಸಿದರೆಂದು ತಿಳಿದುಬಂದಿದೆ. ಸಿಎಂ ಭರವಸೆ ಹಿನ್ನೆಲೆ ನಾಳೆ ಬಂದ್ ವಾಪಾಸ್ ಪಡೆದಿರೋದಾಗಿ ತಿಳಿಸಿದರೆಂದು ತಿಳಿದುಬಂದಿದೆ.
Varthajala Daily, Bengaluru
0 Comments