Ticker

6/recent/ticker-posts

Ad Code

Responsive Advertisement

ಸಾರ್ವಜನಿಕರೇ ಎಚ್ಚರ ... ಲಸಿಕೆ ಪಡೆಯುವತ್ತ ಮೊದಲು ಗಮನ ಹರಿಸಿ...!

ಡಿಸೆಂಬರ್ 2, ಬೆಂಗಳೂರು: ದೇಶದ ಇತರೆ ರಾಜ್ಯದಿಂದ ಕರ್ನಾಟಕ ರಾಜ್ಯ ಹಾಗು ರಾಜಧಾನಿಗೆ ಬರ್ತಿರೋರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ವಿಮಾನ ನಿಲ್ದಾಣ, ಅಂತರ್‌ರಾಜ್ಯ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗು ಇನ್ನಿತರೆ ಸ್ಥಳಗಳಲ್ಲಿ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಲಾಗಿದೆ. ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟನ ಕ್ರಮ ಕೈಗೊಳ್ಳಲು ರಾಜ್ಯ ಸರಕಾರದಿಂದ ಸೂಚಿಸಲಾಗಿದೆ. ನೆಗೆಟಿವ್ ಬಂದವರಿಗೆ ಮಾತ್ರ ಒಳಗೆ ಬಿಟ್ಟುಕೊಳ್ಳಲಾಗುವುದು ಎಂದರು.

ಬಹಳ ಮುಖ್ಯವಾಗಿ ಇಂದು ಕೋವಿಡ್-19 ಓಮಿಕ್ರಾನ್ ವೈರಸ್ ಪತ್ತೆಯಾಗಿರೋದರಿಂದ ಬಹಳ ಆತಂಕ ಇದೆ. ನಾಗರಿಕರು ಭಯ ಭೀತರಾಗುವುದು ಬೇಡ. ಮೊದಲ ಕೆಲಸ ವ್ಯಾಕ್ಸಿನ್ ಪಡೆಯುವತ್ತ ಗಮನ ಹರಿಸಿ ಎಂದು ಬಿಬಿಎಂಪಿ ಆಯುಕ್ತರು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಕೋವಿಶೀಲ್ಡ್, ಕೋ-ವ್ಯಾಕ್ಸಿನ್ ಪಡೆಯಿರಿ. ಒಂದೂ ಲಸಿಕೆ ಪಡೆಯದವರು ಒಂದಾದರೂ ಲಸಿಕೆ ಪಡೆಯಿರಿ ಎಂದು ಆಯುಕ್ತರ ಮನವಿ. 

ಸರ್ಕಾರ ಎಲ್ಲೆಡೆ ಕೆಲಸ ಮಾಡುವ ಪ್ರತಿಯೊಬ್ಬರೂ ಲಸಿಕೆ ಪಡೆಯೋದು ಕಡ್ಡಾಯ. ಮುಂದಿನ ದಿನ ಮಾಲ್, ಥಿಯೇಟರ್‌ಗಳಿಗೆ ಬರುವವರಿಗೆ ಲಸಿಕೆ ಕಡ್ಡಾಯ ಮಾಡಲಿದ್ದೇವೆ. ಸಿನಿಮಾ ಥಿಯೇಟರ್ ನಡೆಸಲು ಅನುಮತಿ ಇದೆ. ಸಿನಿಮಾ, ರೆಸ್ಟೋರೆಂಟ್, ಎಲ್ಲವೂ ನಡೆಯಲಿದೆ. ಎಲ್ಲೇ ನಡೆದ್ರೂ ಮಾಸ್ಕ್ ಕಡ್ಡಾಯ. ಎಲ್ಲರ ಜೀವನ, ಜೀವಾಂಶ ಉಳಿಸೋ ಕೆಲಸ ಮಾಡೋಣ. ಸಿನಿಮಾ ಥಿಯೇಟರ್ ನಡೆಯಲಿದೆ, ಯಾವುದೇ ಬಂದ್ ಆಗೋದಿಲ್ಲ ಎಂದು ಸಹ ತಿಳಿಸಿದರು.

Post a Comment

0 Comments

Ad Code

Responsive Advertisement