ಡಾ. ಈಶ್ವರ ಮಂಟೂರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಮಾನ್ಯಶ್ರೀ ಬಸವರಾಜ ಹೊರಟ್ಟಿ ಸಂತಾಪ.
ಶ್ರೇಷ್ಠ ಪ್ರವಚನಕಾರ, ಜಮಖಂಡಿಯ ಹುನ್ನೂರು ಮಧುರಖಂಡಿ ಬಸವಜ್ಞಾನ ಗುರುಕುಲದ ಅಧ್ಯಕ್ಷರು ಆಗಿದ್ದ, ಆತ್ಮಜ್ಞಾನಿಯಂತಿದ್ದ ಡಾ. ಈಶ್ವರ ಮಂಟೂರ ಅವರ ನಿಧನಕ್ಕೆ ವಿಧಾನ ಪರಿಷತ್ ಸಭಾಪತಿ ಮಾನ್ಯ ಶ್ರೀ ಬಸವರಾಜ ಹೊರಟ್ಟಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಗುರುಗಳು ಲಿಂಗೈಕ್ಯರಾದ ಸುದ್ದಿ ಆಘಾತ ಮತ್ತು ದುಃಖ ತಂದಿದೆ...
ಗುರುಗಳ ಅಕಾಲಿಕ ನಿಧನ ನಂಬಲು ಅಸಾಧ್ಯ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಭಕ್ತ ಸಂಕುಲಕ್ಕೆ ದುಃಖ ಭರಿಸುವ ಶಕ್ತಿಯನ್ನು ಪರಮಾತ್ಮ ದಯಪಾಲಿಸಲಿ ಎಂದು ಶ್ರೀ ಬಸವರಾಜ ಹೊರಟ್ಟಿ ಕಂಬನಿ ಮಿಡಿದಿದ್ದಾರೆ.
0 Comments