ಬೆಂಗಳೂರು : "ನೀರಿಗಾಗಿ ನಮ್ಮ ಹೆಜ್ಜೆ" ಮೇಕೆದಾಟು ಕುಡಿಯುವ ನೀರಿನ ಯೋಜನೆಗಾಗಿ ಕೇಂದ್ರ ಸರ್ಕಾರ ವನ್ನು ಒತ್ತಾಯಿಸಿ ಐತಿಹಾಸಿಕ ಹತ್ತು ದಿನಗಳ ಪಾದಯಾತ್ರೆಯ ಅಂಗವಾಗಿ ಪೂರ್ವ ಸಿದ್ಧತಾ ಸಭೆಯು ನಗರದ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರು ಹಾಗೂ ಮಾಜಿ ಸಚಿವರು ಆದ ರಾಮಲಿಂಗಾರೆಡ್ಡಿರವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.
ಸಿದ್ಧತಾ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಹಾಗೂ ಎನ್.ಜಿ.ಇ. ಎಫ್.ನ ಮಾಜಿ ಅಧ್ಯಕ್ಷರಾದ ಶ್ರೀ ವಿ. ಶಂಕರ್, . ಕಾಂಗ್ರೆಸ್ ಪಕ್ಷದ ಮುಖಂಡರಾದ ಎಸ್.ಮನೋಹರ್, ಮಾಜಿ ಪಾಲಿಕೆ ಸದಸ್ಯರು ನಾಗರಾಜು, ಜಿ.ಜನಾರ್ದನ್, ಎ.ಆನಂದ್, ಜಯಸಿಂಹ, ಪ್ರಕಾಶ್, ಪುಟ್ಟರಾಜು, ಕೃಷ್ಣ, ವೆಂಕಟೇಶ್, ಚಂದ್ರಶೇಖರ, ಅನಿಲ್, ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶುಭ ವೇಣುಗೋಪಾಲ್ ಹಾಗೂ ಅನೇಕ ಮುಖಂಡರು ಭಾಗವಹಿಸಿದ್ದರು
0 Comments