ಬೆಂಗಳೂರು: ಡಾನ್ ಬಾಸ್ಕೋ, ಲಯನ್ಸ್ ಕ್ಲಬ್ - ಪಿರಮಿಡ್ ಮತ್ತು ರೋಟರಿ ಬೆಂಗಳೂರು ಕಲ್ಯಾಣ್ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ 19 ಮಂದಿ ಕೋವಿಡ್ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸಿದ ಕರೋನಾ ವಾರಿಯರ್ ಗಳಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು .
ಈ ಸಂದರ್ಭದಲ್ಲಿ ಮಾತನಾಡಿದ ಕೆ ಜೆ ಜಾರ್ಜ್ ಅವರು ಬಡವರು ಮತ್ತು ಹಿಂದುಳಿದವರು ಇರುವ ಕಡೆ ಲಯನ್ಸ್ ಮತ್ತು ರೋಟರಿ ಮಾಡುತ್ತಿರುವ ಕೆಲಸವನ್ನು ಶ್ಲಾಘಿಸಿದರು. ಕ್ಷೇತ್ರದಲ್ಲಿ ಕಾಂಗ್ರೆಸ್ ಕೈಗೊಂಡಿರುವ ವಿವಿಧ ಕಾರ್ಯಕ್ರಮಗಳನ್ನು ವಿವರಿಸಿದರು. ಅವರು ಶಿಕ್ಷಣ ಮತ್ತು ಕೌಶಲ್ಯ ತರಬೇತಿ ಕ್ಷೇತ್ರದಲ್ಲಿ ಡಾನ್ ಬಾಸ್ಕೋದ ಸಲೇಶಿಯನ್ನರ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಡಾನ್ ಬಾಸ್ಕೋ ಪುಣ್ಯ ಕ್ಷೇತ್ರವು ಧರ್ಮಗುರುಗಳ ನೇತೃತ್ವದಲ್ಲಿ ಸಾಕಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಶ್ಲಾಘಿಸಿದರು.
0 Comments