ಬೆಂಗಳೂರು : ದಿಯಾ ಕೇರ್, ಸ್ಪರ್ಶ ಪೌಂಡೇಶನ್ ಹಾಗೂ ಸ್ಪೆಷಲ್ ಇನಿಷಿಯೇಟಿವ್ ರೈಡರ್ಸ್ ರವರುಗಳ ಸಹಯೋಗದೊಂದಿಗೆ ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಬೆಂಗಳೂರಿನಿಂದ ದೊಮ್ಮನಕುಪ್ಪೆ ಗ್ರಾಮದವರೆಗೆ ಮಧುಮೇಹದ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಬೈಕುಗಳ ರೈಡ್ ಆಯೋಜಿಸಲಾಗಿತ್ತು.
ಶಾಸಕರೂ ಹಾಗೂ ಮಾಜಿ ಸಚಿವರು ಆದ ಸುರೇಶ್ ಕುಮಾರ್ ರವರು ಗೌರವ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಜಾಜಿನಗರ ಮಾಜಿ ಪಾಲಿಕೆ ಸದಸ್ಯೆ ಶ್ರೀಮತಿ ದೀಪಾ ನಾಗೇಶ್, ರೋಟರಿ ಜಿಲ್ಲೆ 3190 ಮಾಜಿ ಡಿ.ಜಿ. ರೊಟೇರಿಯನ್ ಸುರೇಶ್ ಹರಿ, ಚಿತ್ರನಟ ವಿಕ್ರಮ್ ರವಿಚಂದ್ರನ್, ರೋಟರಿ ಬೆಂಗಳೂರು ಕೋರಮಂಗಲ ಅಧ್ಯಕ್ಷ ಇಕ್ರಂ ಅಹ್ಮದ್ ಖಾನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
0 Comments