ಬಳ್ಳಾರಿ, ಅ 12: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯದಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಮನೋಭಾವ ಬೆಳೆಸುವ ಸದುದ್ದೇಶದಿಂದ ಕರ್ನಾಟದಲ್ಲಿ ಕಾರ್ಯಪ್ರವೃತ್ತವಾಗಿದೆ.
ಈ ನೆಲೆಗಟ್ಟಿನಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮಹನಿಯರನ್ನು ಗುರುತಿಸಿ ರಾಜ್ಯ ಮಟ್ಟದ ಎಚ್. ನರಸಿಂಹಯ್ಯ ಪ್ರಶಸ್ತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಕಾರಣ ಸಾಧಕರು ಇದರ ಹೆಗ್ಗಳಿಕೆ ಪಡೆದುಕೊಳ್ಳಲು ಮನವಿ. ಸಾಧಕರು 50 ವರ್ಷದ ಮೇಲೆ ಇರಬೆಕು, ಯಾವುದೇ ರಾಜಕೀಯ ಪಕ್ಷಗಳಲ್ಲಿ ಸಕ್ರಿಯವಾಗಿ ಇರಬಾರದು, ಅರ್ಜಿಗಳನ್ನು ಸಾಧನೆಗಳ ಮಾಹಿತಿಯೊಂದಿಗೆ ಆರ್. ಹೆಚ್. ಯಂ. ಚನ್ನಬಸವಸ್ವಾಮಿ, ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್, 1ನೇ ಮೇನ್, 4ನೇ ಕ್ರಾಸ್, "ಗುರು ನಿವಾಸ " ಬಸವೇಶ್ವರ ನಗರ, ಬಳ್ಳಾರಿ. ದೂರವಾಣಿ: 9481564712, ಈ ವಿಳಾಸಕ್ಕೆ ಅಕ್ಟೊಬರ್ 30ರೊಳಗೆ ಕಳಿಸಿಕೊಡಬೇಕೆಂದು ಆರ್. ಹೆಚ್. ಯಂ. ಚನ್ನಬಸವಸ್ವಾಮಿ, ಜಿಲ್ಲಾ ಅಧ್ಯಕ್ಷರು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ತಿಳಿಸಿದ್ದಾರೆ.
0 Comments