ಮಧ್ಯ ಪ್ರದೇಶ, ಅಕ್ಟೋಬರ್ 01: ಕುಖ್ಯಾತ ಕ್ರಿಮಿನಲ್ ಮತ್ತು ಕಳ್ಳಸಾಗಾಣೆಕೆದಾರ ಬಾಬು ಅಲಿಯಾಸ್ ಜೈಗುರುದೇವ್ ತನ್ನ ಹುಟ್ಟುಹಬ್ಬದ ಕೇಕನ್ನು ಇನ್ಸ್ಪೆಕ್ಟರ್ ನರೇಂದ್ರ ಸಿಂಗ್ ಠಾಕೂರ್ ಎಂಬುವವರ 12 ಬೋರ್ ರೈಫಲ್ನಿಂದ ಕತ್ತರಿಸಿದ್ದಾನೆ.
ದೇವಾಸ್ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಕೂಡ ಈ ಕಳ್ಳಸಾಗಾಣಿಕೆದಾರನ ಹುಟ್ಟುಹಬ್ಬದ ಪಾರ್ಟಿಯಲ್ಲಿ ಹಾಜರಿದ್ದರು.
ಘಟನೆಯ ವಿಡಿಯೋ ಜೂನ್ 20, 2021ರದ್ದು ಮತ್ತು ಇದು ಶುಕ್ರವಾರ ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿದೆ. ಮೂಲಗಳ ಪ್ರಕಾರ, ಹುಟ್ಟುಹಬ್ಬದ ಸಂತೋಷಕೂಟವನ್ನು ಕಳ್ಳಸಾಗಾಣಿಕೆದಾರ ಬಾಬು ಸಿಂಧಿ ಅವನ ತೋಟದ ಮನೆಯಲ್ಲಿ ಆಯೋಜಿಸಲಾಗಿತ್ತು.
ಮೂಲಗಳ ಪ್ರಕಾರ, ಇನ್ಸ್ಪೆಕ್ಟರ್ ಮತ್ತು ಕಾನ್ಸ್ಟೇಬಲ್ ಇಬ್ಬರೂ ಬಾಬುಗೆ ದಯೆ ತೋರಿದ್ದರು. ಅವರು ಎಂದಿಗೂ ಬಾಬುವಿನ ಚಟುವಟಿಕೆಗಳ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಇನ್ಸ್ಪೆಕ್ಟರ್ ಠಾಕೂರ್ ಮತ್ತು ಕಾನ್ಸ್ಟೇಬಲ್ ಪಂಕಜ್ ಕುಮಾವತ್ ಇಬ್ಬರೂ ಕಳ್ಳಸಾಗಾಣೆಕೆದಾರ ಬಾಬುವಿನ ಪಾಲುದಾರರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ ಎಂದು ಮೂಲಗಳು ಬಹಿರಂಗಪಡಿಸಿವೆ.
ಸೆಂಟ್ರಲ್ ನಾರ್ಕೋಟಿಕ್ಸ್ ಬ್ಯೂರೋ ತಂಡವು ಬಾಬು ಸಿಂಧಿ ಮೇಲೆ ಆಗಸ್ಟ್ 26 ರಂದು ಕ್ರಮ ಕೈಗೊಂಡಿತು, ಅಂದಿನಿಂದ ಕಾನ್ಸ್ಟೇಬಲ್ ಪಂಕಜ್ ಕುಮಾವತ್ ದೇವಾಸ್ ಜಿಲ್ಲೆಯಲ್ಲಿ ತನ್ನ ಪೊಲೀಸ್ ಕರ್ತವ್ಯದಿಂದ ಕಾಣೆಯಾಗಿದ್ದಾನೆ.
ಕೆಲವು ದಿನಗಳ ಹಿಂದೆ, ಕಾನ್ಸ್ಟೇಬಲ್ ಪಂಕಜ್ ಕುಮಾವತ್ ಅವರು ರೂ .500 ನೋಟುಗಳನ್ನು ಎರಚುತಿದ್ದ ವಿಡಿಯೋವನ್ನು ಸ್ಮಗ್ಲರ್ ಬಾಬು ಅವರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಕಂಡುಬಂದಿದೆ. ನಂತರ ದೇವಾಸ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಕಾನ್ಸ್ಟೇಬಲ್ ಅನ್ನು ಅಮಾನತುಗೊಳಿಸಿದರು.
ಈಗ, ಕುಖ್ಯಾತ ಕಳ್ಳಸಾಗಣೆದಾರ ಬಾಬು ಇನ್ಸ್ಪೆಕ್ಟರ್ ಠಾಕೂರ್ ಅವರ ಬಂದೂಕಿನಿಂದ ಕೇಕ್ ಕತ್ತರಿಸುವ ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದ್ದು, ಇದು ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಆದಾಗ್ಯೂ, ಈ ವಿಡಿಯೋ ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಲುಪಿದೆ.
ಕಳ್ಳಸಾಗಣೆದಾರ ಬಾಬು ಸಿಂಧಿ ಪ್ರಸ್ತುತ ಕಾನಾವತಿ ಜೈಲಿನಲ್ಲಿ 255 ಕ್ವಿಂಟಾಲ್ ಅಫೀಮಿನ ಕಳ್ಳಸಾಗಣೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.

0 Comments