ಡಯಾಬಿಟಿಸ್ ಹತೋಟಿ ಅಭಿಯಾನವೊಂದು ಆರಂಭವಾಗಿದೆ. ಸಕ್ಕರೆ ಕಾಯಿಲೆಯಿಂದ ನರಳು ವವರಿಗೆ ಒಂದು ವರದಾನವಾಗಿ ಪರಿಣಮಿಸಿ ಜನತೆಗೆ ಒಂದು ದಿಕ್ಸೂಚಿಯನ್ನು ತೋರಿಸಿದೆ. ಸಕ್ಕರೆ ಕಾಯಿಲೆಯ ಸಂಪೂರ್ಣ ನಿಯಂತ್ರಣಕ್ಕೆ 'ಇನ್ಸುಲಿನ್-ಎ' ಎಂಬ ದಿವ್ಯ ಸಸ್ಯವನ್ನು ದಿನಕ್ಕೆ ಎರಡು ಎಲೆಯನ್ನು ದಿನಕ್ಕೆ ಎರಡು ಬಾರಿ ಸೇವಿಸಿದರೆ ಡಯಾಬಿಟಿಸ್ ಕಾಯಿಲೆ ಹತೋಟಿಗೆ ಬರಲು ಸಾಧ್ಯ ಎಂದು ಧರ್ಮಸ್ಥಳದ ಉಪ್ಪಿನಂಗಡಿಯ ಶ್ರೀ ಗಣಪತಿ ಭಟ್ ಅವರು ಹೇಳುತ್ತಾರೆ. ಈ ಅಭಿಯಾನದ ಪ್ರಯುಕ್ತ ಇತ್ತೀಚೆಗೆ ಬೆಂಗಳೂರಿನ ಹಲವಾರು ಕಡೆ ಇದರ ಪ್ರಚಾರವನ್ನು ನಡೆಸಿ ಜನರಲ್ಲಿ ಭರವಸೆಯನ್ನು ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾ ಮೂಲದ ಈ ಸಸ್ಯದ ಹೆಸರು `ಇನ್ಸುಲಿನ್-ಎ'. ಶಾಸ್ತಿçಯ ಹೆಸರು 'ಕೋಸ್ಟಸ್ ಇಗ್ನೇಯಸ್'.ಈ ಸಸ್ಯವನ್ನು ಮನೆಯಲ್ಲಿಯೇ ಬೆಳೆಯಬಹುದಾಗಿದೆ. ಹಾಗೂ ಈ ಸಸ್ಯದಿಂದ ಪೌಡರ ಸಹ ದೊರೆಯುತ್ತದೆ. ಸಸ್ಯ ಮತ್ತು ಈ ಪೌಡರ್ ಬೇಕಾದವರು ಶ್ರೀ ಗಣಪತಿ ಭಟ್ ಮೂಲಿಕಾವನ ಕೈಲ್ವಾರು, ಉಪ್ಪಿನಂಗಡಿ ಮತ್ತು ಸಕಲೇಶಪುರದಲ್ಲಿ ಈ ಕೆಳಗಿನ ದೂರವಾಣಿಗಳ ಮುಖಾಂತರ ಸಂಪರ್ಕಿಸಿ ಪಡೆಯಬಹುದಾಗಿದೆ.
ಸಿಹಿ ಮೂತ್ರಿರೋಗಿಗಳ ನೆಮ್ಮದಿಗಾಗಿಯೇ ಭಗವಂತನೇ ಭೂಮಿಗೆ ಕಳುಹಿಸಿದ ಸಸ್ಯವೆಂಬ ಪೂಜ್ಯ ಭಾವನೆ ಈ ದಿವ್ಯ ಸಸ್ಯಕ್ಕಿದಿ. ಈ ಗಿಡದ ಎಲೆಯನ್ನು ಸೇವಿಸಿ ಸಕ್ಕರೆ ಕಾಯಿಲೆಯನ್ನು ಸಂಪೂರ್ಣ ಹತೋಟಿಯಲ್ಲಿಡಬಹುದು. 'ಕೋಸ್ಟಸ್ ಇಗ್ನೇಯಸ್ ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯದಲ್ಲಿ ನಮ್ಮ ದೇಹದ ಅನಾವಶ್ಯಕ ಕೊಬ್ಬು ಮತ್ತು ಬೊಜ್ಜನ್ನು ಕರಗಿಸುವ ವಿಶೇಷ ಗುಣವಿದೆ. ಎಲ್ಲ ಹಂತದ ಸಕ್ಕರೆ ಕಾಯಿಲೆಗಳಿಗೂ ಇದು ಪ್ರಯೋಜನಕಾರಿಯಾಗಿದ್ದು ಅದೆಷ್ಟೋ ವರ್ಷಗಳಿಂದ ಬಳಲುತ್ತಿರುವ ಸಾವಿರಾರು ಮಂದಿ ಈ "ಇನ್ಸುಲಿನ್-ಎ" ಎಲೆಯನ್ನು ತಿನ್ನಲು ಪ್ರಾರಂಭಿಸಿ ತಮ್ಮ ಕಾಯಿಲೆಯನ್ನು ನಿಯಂತ್ರಣ ದಲ್ಲಿಟು ಕೊಂಡಿದ್ದಾರೆ.
ಇನ್ಸುಲಿನ್-ಎ ಗಿಡಗಳನ್ನು ದೇಶ-ವಿದೇಶದ ಜನರು ನಾನಾ ಕಡೆಗಳಲ್ಲಿ ಈ ಸಸ್ಯವನ್ನು ಬೆಳೆಸಿ ಕಾಯಿಲೆ ಇರುವ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. 'ಇನ್ಸುಲಿನ್-ಎ ಸಸ್ಯ ಪ್ರತಿ ಮನೆಯಲ್ಲಿರ ಬೇಕಾದಂಥ ಸಸ್ಯ. ಇನ್ಸುಲಿನ್-ಎ ಸಸ್ಯ ಮನೆ ಯಲ್ಲಿದ್ದರೆ ಮನೆಯಲ್ಲಿಯೇ ಒಬ್ಬ ತಜ್ಞ ವೈದ್ಯ ಇದ್ದಂತೆ. ಸಮಪಾಲು ಮಣ್ಣು, ಮರಳು, ಸಗಣಿ, ಎರೆಹುಳು ಮುಂತಾದ ನೈಸರ್ಗಿಕ ಗೊಬ್ಬರ ಗಿಡ ಬೆಳೆಸಲು ಉತ್ತಮ ಸಾಧಾನಗಳಾಗಿವೆ.
"ಇನ್ಸುಲಿನ್-ಎ" ಉಪಯೋಗಿಸುವ ವಿಧಾನ
** ಎಫ್\ಎಸ್ 200ರ ಒಳಗಡೆ ಇರುವವರು ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಒಂದು ಎಲೆ ಚೆನ್ನಾಗಿ ಅಗಿದು ತಿನ್ನಬೇಕು.
** ಎಫ್\ಎಸ್ 200ರ ಮೇಲೆ ಇರುವವರು ಅಥವಾ ಇನ್ಸುಲಿನ್ ಇಂಜಕ್ಷನ್ ತೆಗೆದುಕೊಳ್ಳು ವವರು ಬೆಳಿಗ್ಗೆ ಒಂದು ಎಲೆ ರಾತ್ರಿ ಒಂದು ಎಲೆ ತಿಂಡಿ ಅಥವಾ ಊಟದ ಅರ್ಧ ಗಂಟೆ ಮೊದಲು ಅಗಿದು ತಿನ್ನಬೇಕು. ನಂತರ ಒಂದು ಲೋಟಾ ನೀರು ಕುಡಿಯಬೆಕು.
** 15 ದಿನಗಳಿಗೊಮ್ಮೆ ಸಕ್ಕರೆ ಮಟ್ಟವನ್ನು ಪರೀಕ್ಷಿಸಿಕೊಂಡು ಪೂರ್ತಿಯಾಗಿ ನಿಯಂತ್ರಣಕ್ಕೆ ಬಂದ ನಂತರ ಹಂತಹAತವಾಗಿ ಡಾಕ್ಟರ್ ನೀಡಿದ ಔಷಧಿಯನ್ನು ಅವರ ಸಲಹೆ ಪಡೆದು ಕಡಿಮೆ ಮಾಡುತ್ತಾ ಕೊನೆಗೆ ಪೂರ್ತಿಯಾಗಿ ಬಿಡಬಹುದು.
ಒಟ್ಟಾರೆ 'ಇನ್ಸುಲಿನ್-ಎ' ಸಸ್ಯವು ಸಕ್ಕರೆ ಕಾಯಿಲೆ(ಡಯಾಬಿಟಿಸ್) ಇರುವುದನ್ನು ನಿಯಂತ್ರಣದಲ್ಲಿ ಇಟ್ಟುಕೊಳಲು ಮಧು ಮೇಹಿಗಳಿಗೆ ಒಂದು ರಾಮಬಾಣ ಎಂದು ಇದರ ಸಂಘಟಿಕರಾದ ಶ್ರೀ ಗಣಪತಿ ಭಟ್ ಬಹಳ ವಿಶ್ವಾಸದಿಂದ ಹೇಳುತ್ತಾರೆ.ಈ ಸಸ್ಯವನ್ನು ಪಡೆಯಲು ಹಾಗೂ ಸಂಪೂರ್ಣ ವಿವರಗಳಿಗೆ ಈ ಕೆಳಗಿನ ವಿಳಾಸಕ್ಕೆ ಸಂಪರ್ಕಿಸ ಬಹುದಾಗಿದೆ.
1. ಗಣಪತಿ ಭಟ್, "ಮೂಲಿಕಾವನ ಕೈಲಾರು", ಕೈಲಾರು ಮೆಡಿಕಲ್ಸ್, ಉಪ್ಪಿನಂಗಡಿ (ಧರ್ಮಸ್ಥಳ), ದಕ್ಷಿಣ ಕನ್ನಡ.
2. ಸಂಜೀವಿನಿ ಔಷಧಾಲಯ, ಅಶೋಕ ಅಡ್ಡರಸ್ತೆ, ಸಕಲೇಶಪುರ,
0 Comments