Ticker

6/recent/ticker-posts

Ad Code

Responsive Advertisement

ಅಂತಾರಾಷ್ಟ್ರೀಯ ಕ್ಯಾನ್ಸರ್ ಚಿಕಿತ್ಸಾ ತಜ್ಞ ಪ್ರೊ. ಕೆ.ಎಸ್ .ಗೋಪಿನಾಥ್ ಅವರ ಸಂದರ್ಶನ ಶೀಘ್ರ ವಾರ್ತಾಜಾಲ ವಾಹಿನಿಯಲ್ಲಿ

Karnataka's Sr. Journalist Venkatasubbu Mokshagundam meet World Famous Indian Cancer Specialist, Padmashri Awardee Winner Dr. K.S. Gopinath 

ರಾಷ್ಟ್ರೀಯ, ಅಂತಾ ರಾಷ್ಟ್ರೀಯ ಖ್ಯಾತಿಯ ಕ್ಯಾನ್ಸರ್ ಚಿಕಿತ್ಸಾ ತಜ್ಞರಾದ ಪ್ರೊ. ಗೋಪಿನಾಥ್ ಕೆ.ಎಸ್. ಅವರನ್ನು ಬೆಂಗಳೂರಿನ ಮಲ್ಲೇಶ್ವರದ www.varthajala.live ಪ್ರಮುಖ ಮಾಧ್ಯಮ ಸಂಸ್ಥೆಯ ಪ್ರಧಾನ ಮಾರ್ಗದರ್ಶಕರು ಹಾಗೂ ವಿಶೇಷ ವರದಿಗಾರರೂ ಆಗಿರುವ ರಾಜ್ಯದ ಹಿರಿಯ ಪತ್ರಕರ್ತ, ವೈದ್ಯರ ಆಪ್ತ ಆತ್ಮೀಯರೂ ಆದ ವೆಂಕಟಸುಬ್ಬು ಮೋಕ್ಷಗುಂಡ0 ಅವರು ಡಾ. ಗೋಪಿನಾಥ್ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿದ್ದ ಆತ್ಮೀಯ ಸಂದರ್ಭ. 

ಈ ವಿಶೇಷ ಸಂದರ್ಭದಲ್ಲಿ ಮೋಕ್ಷಗುಂಡಂ ಅವರು ವಾರ್ತಾಜಾಲ ಮಾಧ್ಯಮ ಸಂಸ್ಥೆಯ ಕ್ರಿಯಾಶೀಲ, ಆಧುನಿಕ ತಂತ್ರಜ್ಞಾನದ ಜನಪರ ಸೇವೆಯ ವಿವರಗಳನ್ನು ನೀಡಿರುತ್ತಾರೆ. ವಾರ್ತಾಜಾಲ ಸಂಸ್ಥೆಯ ಪ್ರಧಾನರಾದ ಬಿ.ಕೆ. ಪ್ರಸನ್ನ ಅವರು ಮಾಧ್ಯಮ ಕ್ಷೇತ್ರದಲ್ಲಿ ತಮ್ಮ ಪತ್ರಿಕೆಯ ಮೂಲಕ ಹಮ್ಮಿಕೊಂಡಿರುವ ಬಹುಮುಖ ಕಾರ್ಯಕ್ರಮಗಳ ಜನಪರ ಕಾಳಜಿಯ ಪೂರ್ಣ ಮಾಹಿತಿಗಳನ್ನು ಡಾ. ಗೋಪಿನಾಥ್ ಅವರಿಗೆ ತಿಳಿಸಲಾಗಿರುತ್ತದೆ. ನಾಡಿನ ಇಂತಹ ಹೆಮ್ಮೆಯ ಪುತ್ರನನ್ನು, ಅವರು ಕರ್ನಾಟಕಕ್ಕೆ ಮಾತ್ರವಲ್ಲದೇ ಇಡೀ ರಾಷ್ಟ್ರಕ್ಕೆ ಸಲ್ಲಿಸಿರುವ ಅಮೋಘ ಸೇವೆಯನ್ನು ಆದಷ್ಟು ಶೀಘ್ರವೇ www.varthajala.live ನಲ್ಲಿ ಪ್ರಸಾರ ಮಾಡಲು ಆಶಿಸಿರುತ್ತೇವೆ. 

ಇದು ಕೇವಲ ನಮ್ಮ ಮಾಧ್ಯಮ ಕ್ಷೇತ್ರಕ್ಕೆ ಸೀಮಿತವಾದ ಕಾರ್ಯವ್ಯಾಪ್ತಿ ಆಗಿರುವುದಿಲ್ಲ. ಅವರ ಸಂದರ್ಶನ, ಜನತೆಯ ಸೇವೆಯ ಎಲ್ಲಾ ಪೂರ್ಣವಾದ ಮಾಹಿತಿಯನ್ನು ಅಸಂಖ್ಯ ವೀಕ್ಷಕರಿಗೆ ನೀಡಬಯಸುವುದು ನಮ್ಮ ಆಶಯವಾಗಿರುತ್ತದೆ. ಪ್ರೇಕ್ಷಕರ ಸಮ್ಮುಖದಲ್ಲಿ ನಾವೆಲ್ಲರೂ ಶೀಘ್ರವಾಗಿಯೇ ನೇರಪ್ರಸಾರದಲ್ಲಿ ಬರುತ್ತಿದ್ದೇವೆ ಎಂದು ಈ ಮೂಲಕ ತಿಳಿಯಬಯಸುತ್ತಿದ್ದೇವೆ. 

ತಮ್ಮಗಳ ಸಲಹೆ ಸೂಚನೆಗಳನ್ನು ಅತ್ಯಂತ ವಿನಯದಿಂದ ನಿರೀಕ್ಷಿಸುತ್ತಿದ್ದೇವೆ.

-ವೆಂಕಟಸುಬ್ಬು ಮೋಕ್ಷಗುಂಡ0, ಹಿರಿಯ ಪತ್ರಕರ್ತರು

080-23319247, 9448119247, 

Email : editorvarthajala@gmail.com

Post a Comment

0 Comments

Ad Code

Responsive Advertisement