ಗಾಂಧಿನಗರದಲ್ಲಿ ಕರ್ನಾಟಕ ರಾಜ್ಯ ಭೋವಿ (ವಡ್ಡರ)ಮಹಾಸಭಾದ ಪದಾಧಿಕಾರಿಗಳ ಸಭೆ ಆಯೋಜಿಸಲಾಗಿತ್ತು .
ಸಭೆಯಲ್ಲಿ *ರಾಜ್ಯಾಧ್ಯಕ್ಷರಾದ ಎಚ್ .ಮಂಜಪ್ಪರವರು ಮತ್ತು ರಾಜ್ಯ ಕಾರ್ಯಾಧ್ಯಕ್ಷರಾದ* *ಹುಲ್ಲಪ್ಪ ಹಳ್ಳೂರು ,ರಾಜ್ಯ ಉಪಾಧ್ಯಕ್ಷರಾದ ಹೆಚ್.ನಟೇಶ್ ಹಾಗೂ ಕಾರ್ಯಕಾರಿ* *ಸದಸ್ಯರುಗಳಾದ ಕೃಷ್ಣಮೂರ್ತಿ* *ಬಸವರಾಜ್*
*ರವಿ.ಯು.ನಲತ್* *ವಾಡ್* *ಯಲಪ್ಪ* *ನಾ.ಬಂಕದ ,ಪದ್ಮಾ.ಪಿ.ಎಮ್.ಕುಮಾರ್ ರವರು* ಭಾಗವಹಿಸಿ ,ಸಂಸ್ಥಾಪಕರಾದ *ಮುನಿರಾಜು. ಆರ್ ರವರನ್ನು* *ಕರ್ನಾಟಕ ರಾಜ್ಯ ಭೋವಿ ಮಹಾಸಭಾದಿಂದ ಉಚ್ಚಾಟನೆ* ಮಾಡಿದರು* .ಸಂಘದ 9ಸದಸ್ಯರು ಸರ್ವಸಮ್ಮತದಿಂದ ಉಚ್ಚಾಟನೆಯನ್ನ ಆನುಮೋದಿಸಿದರು.
ಇದೇ ಸಂದರ್ಭದಲ್ಲಿ *ರಾಜ್ಯಾಧ್ಯಕ್ಷರಾದ ಎಮ್.ಮಂಜಪ್ಪರವರು* ಮಾತನಾಡಿ ಸಂಸ್ಥಾಪಕರಾದ ಮುನಿರಾಜುರವರು ಅವಧೂತ ವಿನಯ್ ಗುರೂಜಿರವರನ್ನ ಬ್ಲಾಕ್ ಮೇಲ್ ಮಾಡಲು ಹೋಗಿ ಪೂಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .ವಾಟ್ಸಪ್ ಮತ್ತು ಪೇಸ್ ಬುಕ್ ಗಳಲ್ಲಿ ಮಹಿಳೆಯರ ಬಗ್ಗೆ ಅವಾಚ್ಯ ಸಂದೇಶ ಕಳುಹಿಸುವುದು ಮತ್ತು ಹಲವಾರು ತಿಂಗಳಿನಿಂದ ಸಂಘದ ಸಭೆ ನಡಸದೇ ಏಕಪಕ್ಷೀಯ ನಿರ್ಣಯ ಕೈಗೊಂಡಿರುವುದು ಇದ್ದರಿಂದ ಬೋವಿ ಸಮಾಜ ಸಂಘಟನೆಗೆ ಹಿನ್ನಡೆಯಾಗಿದೆ .ಹಲವಾರು ಗುರುತರ ಅಪರಾಧ ಹಿನ್ನಲೆ ಇರುವ ಸಂಸ್ಥಾಪಕರಾದ ಮುನಿರಾಜು. ಆರ್.ರವರನ್ನ ಉಚ್ಚಾಟನೆ ಮಾಡಲಾಗಿದೆ .
ಮುನಿರಾಜು. ಆರ್ ರವರಿಗೂ ಸಂಘಕ್ಕೂ ಇನ್ನ ಮುಂದೆ ಯಾವುದೇ ಸಂಭಂದವಿಲ್ಲ .
ಭೋವಿ ಸಮಾಜದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿಗಳ ಮಾರ್ಗದರ್ಶನದಲ್ಲಿ ಶಿಕ್ಷಣ ,ಸಂಘಟನೆ ಮತ್ತು ನಮ್ಮ ಸಮಾಜವನ್ನ ಸಮಾಜದ ಮುಖ್ಯವಾಹಿನಿ ತರಲು ಸಂಘವು ಶ್ರಮಿಸಲಿದೆ ಎಂದು ಹೇಳಿದರು .
0 Comments