ದಿನಾಂಕ : 04-05-2022ರಂದು ಭಾರತೀಯ ಜನತಾಪಕ್ಷದ 40% ಪರ್ಸೆಂಟೇಜ್ ಭ್ರಷ್ಟಾಚಾರದ ಸರ್ಕಾರದ ವಿರುದ್ಧ ಮತ್ತು ಪಿಎಸ್ಐ ನೇಮಕಾತಿಯಲ್ಲಿ ಉನ್ನತ ಶಿಕ್ಷಣ ಸಚಿವರಾದ ಅಶ್ವತ್ಥನಾರಾಯಣ್ ರವರ ಪಾತ್ರವಿದೆಯೆಂದು ರಾಜ್ಯದ ಮುಖ್ಯಮಂತ್ರಿಗಳು ಅಶ್ವತ್ಥನಾರಾಯಣ್ರವರ ರಾಜೀನಾಮೆ ಕೇಳಿ ಪಡೆಯಬೇಕು. ಅಥವಾ ರಾಜ್ಯಪಾಲರು ಇವರನ್ನು ಸಚಿವ ಸ್ಥಾನದಿಂದ ‘ಡಿಸ್ಮಿಸ್’ ಮಾಡಬೇಕು ಎಂದು ಪ್ರತಿಭಟನಾ ರ್ಯಾಲಿಯನ್ನು ಮಲ್ಲೇಶ್ವರಂ ಆಟದ ಮೈದಾನದಲ್ಲಿ ಹಮ್ಮಿಕೊಂಡಿದ್ದರು. ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಕಾಂಗ್ರೆಸ್ಪಕ್ಷದ ಅಭಿಮಾನಿಗಳು ಪ್ರತಿಭಟನಾ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಅವರ ಕೈಯಲ್ಲಿ ‘ಭ್ರಷ್ಟಾಚಾರಿ ಅಶ್ವತ್ಥನಾರಾಯಣ್ಗೆ ಧಿಕ್ಕಾರ’ ಬಿಜೆಪಿ ಸರ್ಕಾರಕ್ಕೆ ಧಿಕ್ಕಾರ. 40% ಭ್ರಷ್ಟಾಚಾರ ಸರ್ಕಾರಕ್ಕೆ ‘ಧಿಕ್ಕಾರ’, ಗುಳಂ 6ನಾರಾಯಣ್ಗೆ ಧಿಕ್ಕಾರ ಎಂಬ ಹ್ಯಾಂಡ್ಪೋಸ್ಟರ್ಗಳು ರಾರಾಜಿಸುತ್ತಿದ್ದವು.
ಜನಸಾಮಾನ್ಯರಲ್ಲಿ ಭಾರತೀಯ ಜನತಾ ಪಕ್ಷದ ಬಗ್ಗೆ ವಿರೋಧಿ ಅಲೆ ಹೆಚ್ಚಾಗುತ್ತಿದೆ. ಇದಕ್ಕೆ ಸರಿಯಾಗಿ ಸಚಿವರು ಜನಸಾಮಾನ್ಯರೊಂದಿಗೆ ಸರಳ, ಸಜ್ಜನಿಕೆಯ ನಡವಳಿಕೆಯಿಂದ ನಡೆದುಕೊಳ್ಳುವುದಿಲ್ಲ ಎಂದು ಸಾರ್ವಜನಿಕರ ಅಭಿಪ್ರಾಯ. ಈಗಲಾದರೂ ಪಕ್ಷದ ಹಿರಿಯ ನಾಯಕ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ 2023ರಲ್ಲಿ ಜನರು ತಮ್ಮ ಅಭಿಪ್ರಾಯವನ್ನು ಮತದಾನದಲ್ಲಿ ವ್ಯಕ್ತಪಡಿಸುತ್ತಾರೆ.


.jpeg)
0 Comments