ಬಳ್ಳಾರಿ ಆ 01. ಮದಿರೆ ಗ್ರಾಮದ ನರ್ಸರಿ ಹತ್ತಿರ ಕಂಪ್ಲಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರಾದ ಟಿ.ಹೆಚ್. ಸುರೇಶ್ ಬಾಬು ರವರಿಗೆ ಮತ್ತು ಎಪಿಎಂಸಿ ನೂತನ ಅಧ್ಯಕ್ಷರಾದ ಉಮೇಶ್ ರವರಿಗೆ, ಕಾಂಡ್ರ ಬಾಬು ಅವರಿಗೆ ಎಪಿಎಂಸಿ ಆಡಳಿತ ಮಂಡಳಿಯ ನೂತನವಾಗಿ ನಾಮನಿರ್ದೇಶಕ ಸದಸ್ಯರುಗಳಾದ ಮದಿರೆ ಕುಮಾರಸ್ವಾಮಿ, ದಮ್ಮೂರು ಶ್ರೀಮತಿ ಪೂಜಾರಿ ಲಕ್ಷ್ಮಿದೇವಿ, ನಾಗರಾಜ್ ಹಾಗು ದಮ್ಮೂರು ತಿರುಮಲ ರೆಡ್ಡಿ,ಕೃಷ್ಣಮೂರ್ತಿ ಇವರುಗಳಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನೂರಾರು ಬಿಜೆಪಿ ಮುಖಂಡರು ಹಾಗು ಕಾರ್ಯಕರ್ತರು, ಗ್ರಾಮ ಪಂ ಸದಸ್ಯರುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

0 Comments