Ticker

6/recent/ticker-posts

Ad Code

Responsive Advertisement

ಆ.5ರಂದು ಸ್ವಾತಂತ್ರ್ಯೋತ್ಸವ ಏಕತಾ ಯಾತ್ರೆಗೆ ಸ್ವಾಗತ

ಬೆಂಗಳೂರು:  ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ನಡೆಯುತ್ತಿರುವ ಏಕತಾ ಯಾತ್ರೆಯು 5-8-2021ರಂದು ಬೆಳಿಗ್ಗೆ 10ಕ್ಕೆ ಬೆಂಗಳೂರಿಗೆ ಆಗಮಿಸಲಿದೆ. ಈ ಯಾತ್ರೆಯನ್ನು ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ  ನಳಿನ್‍ಕುಮಾರ್ ಕಟೀಲ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನ ಪರಿಷತ್ ಸದಸ್ಯರೂ ಆದ ಎನ್.ರವಿಕುಮಾರ್ ಅವರು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದ ಮುಂಭಾಗದಲ್ಲಿ ಸ್ವಾಗತಿಸಲಿದ್ದಾರೆ.


ಮಧುರೆಯಿಂದ ಆರಂಭವಾದ ಈ ಯಾತ್ರೆಯು ಹಿಮಾಚಲ ಪ್ರದೇಶದ ಅಟಲ್ ಟನೆಲ್ ಬಳಿ ಮುಕ್ತಾಯಗೊಳ್ಳಲಿದೆ. ಒಟ್ಟು 4,450 ಕಿಮೀ ದೂರವನ್ನು ಈ ಯಾತ್ರೆ ಕ್ರಮಿಸಲಿದೆ. ರಾಜಲಕ್ಷ್ಮಿ ಮಂಡ ಅವರ ನೇತೃತ್ವದಲ್ಲಿ ಬುಲೆಟ್ ಮೂಲಕ ಏಕತಾ ಯಾತ್ರೆ ತೆರಳುತ್ತಿದ್ದು ಈ ತಂಡದಲ್ಲಿ 25 ಜನರು ಭಾಗವಹಿಸುತ್ತಿದ್ದಾರೆ. ತಂಡವು ಈಗಾಗಲೇ ಒಂದು ಸಾವಿರ ಕಿಮೀ ಕ್ರಮಿಸಿದೆ. ಒಟ್ಟು 19 ದಿನಗಳ ಯಾತ್ರೆ ಇದಾಗಿದೆ. 

ಪ್ರಧಾನಿ ನರೇಂದ್ರ ಮೋದಿ ಅವರ ಟನೆಲ್‍ಗಳ ನಿರ್ಮಾಣ, ಮೂಲ ಸೌಕರ್ಯಗಳ ಅಭಿವೃದ್ಧಿ, ಸೌರ ವಿದ್ಯುತ್ ಬಳಕೆ ಕುರಿತ ಚಿಂತನೆಗಳೂ ಸೇರಿದಂತೆ ಅಭಿವೃದ್ಧಿ ಕಾರ್ಯಗಳ ಕುರಿತಂತೆ ಜನಜಾಗೃತಿ ಮೂಡಿಸಿ ಅವರಿಗೆ ಬಲ ತುಂಬುವ ದೃಷ್ಟಿಯಿಂದ ಈ ಯಾತ್ರೆ ನಡೆಯುತ್ತಿದೆ. ದೇಶದ ಪ್ರತಿಯೊಬ್ಬರೂ ಸ್ವಾತಂತ್ರ್ಯೋತ್ಸವ ಆಚರಿಸುವಂತೆ ಜಾಗೃತಿ ಮೂಡಿಸುವುದು, ಮಹಿಳಾ ಸಶಕ್ತೀಕರಣ, ದೇಶದ ಮಹಿಳೆಯರಲ್ಲಿ ಸಂಪ್ರದಾಯ ಮತ್ತು ಸಂಸ್ಕøತಿಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶವನ್ನೂ ಈ ಯಾತ್ರೆ ಹೊಂದಿದೆ.


Post a Comment

0 Comments

Ad Code

Responsive Advertisement