Ticker

6/recent/ticker-posts

Ad Code

Responsive Advertisement

MADHUGIRI : ಸಂರಕ್ಷಣೆ/ ನಿವೃತ್ತಿ ಸೌಲಭ್ಯ /ಹೆಚ್ಚುವರಿ ವೇತನಕ್ಕಾಗಿ ಪ್ರತಿಭಟನೆ

ಮಧುಗಿರಿ : ಪಟ್ಟಣದ ತಾಲ್ಲೂಕು ದಂಡಾಧಿಕಾರಿಗಳ ಕಚೇರಿ ಮುಂದೆ ಅಖಿಲ ಭಾರತ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೌಂಡೇಶನ್ ವತಿಯಿಂದ ಸಂರಕ್ಷಣೆ, ನಿವೃತ್ತಿ ಸೌಲಭ್ಯ,  ಹೆಚ್ಚುವರಿ ವೇತನಕ್ಕಾಗಿ ಪ್ರತಿಭಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರ ಸಂಘದ ಜಿಲ್ಲಾಧ್ಯಕ್ಷೆ ಕಮಲಮ್ಮ ಮಾತನಾಡಿ ನಮ್ಮ ಸಮಸ್ಯೆಗಳನ್ನು ಸರ್ಕಾರದ ಮುಂದೆ ಇಡುತ್ತಿದ್ದೇವೆ.  ನಮ್ಮ ಸಮಸ್ಯೆಗಳು ಸಾಂಕ್ರಮಿಕ ರೋಗದ ವಿರುದ್ಧ ಹೋರಾಡುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಸುರಕ್ಷಿತ ಗೇರ್, ಅಪಾರ ಬತ್ತಿ ಮತ್ತು ವಿಮಾ ರಕ್ಷಣೆ ಕೊಡಬೇಕು ಹಾಗೂ ಪೋಷನ್ ಟ್ರ್ಯಾಕ್ಟರ್ ಮೊಬೈಲ್ ಅಪ್ಲಿಕೇಶನ್ ನೀಡಬೇಕು. ನ್ಯೂಟ್ರಿ ಗಾರ್ಡನ್ ಹಾಗೂ ಐಸಿಡಿಎಸ್ ನಲ್ಲಿ ಸಾಕಷ್ಟು ಪೌಷ್ಟಿಕ ಪೂರೈಕೆ,  ಹಾಗೂ ಶಾಲಾ -ಪೂರ್ವ ಶಿಕ್ಷಣ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತರಿಗೆ ಪೂರ್ಣಪ್ರಮಾಣದ ಗೌರವಧನ ಮತ್ತು ಐಸಿಡಿಎಸ್ ಹೊರತುಪಡಿಸಿ ಬೇರೆ ಯಾವುದೇ ಕೆಲಸವನ್ನು ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ  

   ಯೋಜಿಸಬಾರದು ಮತ್ತು ಏಕರೂಪದ ಕೆಲಸದ ಪರಿಸ್ಥಿತಿಗಳು, ಹಾಗೂ ಪಿಂಚಣಿ ನೀಡುವ ತನಕ ಬಲವಂತ ನಿವೃತ್ತಿ ಮಾಡಬಾರದು,  ಮತ್ತು ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ದೇಶಾದ್ಯಂತ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಅನುಷ್ಠಾನಗೊಳಿಸಬೇಕು. ಹಾಗೂ ಅಂಗನವಾಡಿ ನೌಕರರ ಸಂಘಗಳ ಪ್ರತಿನಿಧಿಗಳನ್ನು ಸೇರುವ ಮೂಲಕ ಕುಂದುಕೊರತೆ ಪರಿಹಾರ ಸಮಿತಿಯನ್ನು ಕೇಂದ್ರ ಎಲ್ಲ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ರಚಿಸಬೇಕು ಹಾಗೂ ಐಸಿಡಿಎಸ್ ಅನ್ನು ಶಾಶ್ವತವಾಗಿಸುವುದು ಮತ್ತು ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಕಾಯಂಗೊಳಿಸಬೇಕು ಎಂದು ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು  ತಾಲೂಕು ದಂಡಾಧಿಕಾರಿ ವೈ ರವಿ ರವರಿಗೆ ಮನವಿ ಸಲ್ಲಿಸಿದರು.

 ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ಪಾರ್ವತಮ್ಮ ಕಾರ್ಯದರ್ಶಿ ಸರೋಜಮ್ಮ. ಅಂಗನವಾಡಿ ಕಾರ್ಯಕರ್ತರಾದ ಶಾರದಮ್ಮ. ಶಾಮಲಾ. ನಾಗರತ್ನಮ್ಮ. ಶ್ಯಾಮಲಾ ಇನ್ನಿತರ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಇದ್ದರು. ವರದಿ:ನಾಗೇಶ್ ಜೀವಾ ಮಧುಗಿರಿ

Post a Comment

0 Comments

Ad Code

Responsive Advertisement