ಜಗತ್ತು ಕಂಡ ತುಂಬ ಅಪರೂಪದ ನಟ ಕಲಾರಾಧಕ ಕಲಾದೇವಿಯ ಮಾನಸ ಪುತ್ರ ಶ್ರೀ ದಿಲೀಪ ಕುಮಾರ ನಮ್ಮನ್ನು ಅಗಲಿದ ಸುದ್ದಿ ಕೇಳಿ ಆಘಾತವಾಯಿತು. ಒಬ್ಬ ಮಹಾನ ವ್ಯಕ್ತಿಯ ಅಗಲಿಕೆಯ ನೋವು ನಮ್ಮನ್ನು ಸದಾ ಕಾಡುತ್ತಿರುತ್ತದೆ,
ಪಾತ್ರಕ್ಕೆ ಜೀವ ತುಂಬುವ ನೋಡುವವರ ಹೃದಯವನ್ನೇ ಗೆಲ್ಲುವ ಅಪರೂಪದ ನಟ ಕಲೆಗಾರ ಎಂಬುವುದಕ್ಕೆ ಅವರ ಮೊದಲ ಚಲನಚಿತ್ರ ಸಾಕ್ಷಿ ಆಗಿತ್ತು. ಅವರು ಚಿತ್ರರಂಗದಲ್ಲಿ ಮಾತ್ರ ಅಲ್ಲದೇ ಸಂಸತ್ತಿನಲ್ಲೂ ನಮ್ಮ ಜೊತೆಗೆ ಕೆಲ ಕಾಲ ರಾಜ್ಯಸಭಾ ಸದಸ್ಯರಾಗಿಯೂ ಕೂಡ ರಾಷ್ಟ್ರಕ್ಕೆ ಸೇವೆ ಸಲ್ಲಿಸಿದರು
(ಮಾನ್ಯ ರಾಷ್ಟ್ರಪತಿಯವರಿಂದ ನಾಮ ನಿರ್ದೇಶಿತರಾಗಿ) ನನ್ನೊಂದಿಗೆ ಕಳೆದ ಕ್ಷಣಗಳು ಅಮೂಲ್ಯ. ದೇಶ ಒಬ್ಬ ಮಹಾನ್ ನಟನನ್ನು ಕಳೆದುಕೊಂಡಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಿಲಿ . ಎಂದು ಮಾಜಿ ಸಂಸದ ಐ. ಜಿ. ಸನದಿ ತೀವ್ರ ಸಂತಾಪ ಸೂಚಿಸಿದ್ದಾರೆ


0 Comments