Ticker

6/recent/ticker-posts

Ad Code

Responsive Advertisement

ಶಶಿಕಲಾ ಜೊಲ್ಲೆ ಮತ್ತು ಪರಣ್ಣ ಮನವಳ್ಳಿ ರಾಜಿನಾಮೆಗೆ ಒತ್ತಾಯ

ಬಳ್ಳಾರಿ ಜುಲೈ 24.ಸಚಿವೆ ಶಶಿಕಲಾ ಜೊಲ್ಲೆ ರವರು ಮತ್ತು ಶಾಸಕ ಪರಣ್ಣ ಮುನವಳ್ಳಿ ಅವರು ಇಬ್ಬರು ಶಾಸಕ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಕೊಡಬೇಕೆಂದು ವೆಂಕಟೇಶ್ ಹೆಗಡೆ, ವಕೀಲರು,ಕೆಪಿಸಿಸಿ ಮಾಧ್ಯಮ ವಕ್ತಾರರು  ಆಗ್ರಹಿಸಿದ್ದಾರೆ. ಅಪೌಷ್ಠಿಕ ಮಕ್ಕಳಿಗೆ ಮೊಟ್ಟೆ ನೀಡಲು ರಾಜ್ಯ ಸರ್ಕಾರ ಮಂಜೂರುಮಾಡಿದ ಅನುದಾನದಲ್ಲಿ ಭ್ರಷ್ಟಾಚಾರ ಎಸಗುವ ರಾಜ್ಯ ಮಹಿಳಾ ಮತ್ತುಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅವರ ಕಾರ್ಯ ನಿಜಕ್ಕೂ ಹೃದಯಹೀನ. ಇದಕ್ಕೆ ಸಾತ್ ನೀಡಿರುವ ಬಿಜೆಪಿ ಶಾಸಕ ಪರಣ್ಣ ಮನವಳ್ಳಿಯೂ ಸಹ ಅಮಾನವೀಯವಾಗಿ ನಡೆದುಕೊಂಡಿದ್ದಾರೆ.ಗರ್ಭಿಣಿಯರಿಗೆ,ಮಕ್ಕಳಿಗೆ ಮೊಟ್ಟೆ ಕೊಡಬೇಕು ಎಂಬ ಮಾನವೀಯ ಕಾರ್ಯವನ್ನು ಓರ್ವ ಮಹಿಳಾ ಸಚಿವರಾಗಿ ಅತ್ಯಂತ ಕಾಳಜಿ, ಮಮತಾ ದೃಷ್ಟಿಯಿಂದ ಕಿಂಚಿತ್ತೂ ಲೋಪದೋಷ ಆಗದೆ ನಿರ್ವಹಿಸಬೇಕಿತ್ತು. ಆದರೆ, ಇದರಲ್ಲೂ ಕಿಕ್ಬ್ಯಾಕ್ ಪಡೆದಿರುವುದು ನಿಜಕ್ಕೂ ಅಮಾನವೀಯ ಸಂಗತಿ ಎಂದರು.


ತಮಗೆ ಬೇಕಾದ ಕಿಕ್ಬ್ಯಾಕ್ ಪಡೆಯುವ ಸಲುವಾಗಿಯೇ ಟೆಂಡರ್ ಪದ್ಧತಿಯನ್ನು ಬದಲಾಯಿಸುವ ವೀಡಿಯೋ ಚಿತ್ರಣ ಇದೀಗ ಇಡೀ ಕರ್ನಾಟಕವನ್ನು ಬೆಚ್ಚಿಬೀಳಿಸುತ್ತಿದೆ. ರಾಜ್ಯ ಸರ್ಕಾರದ ನೀತಿಗೆಟ್ಟ ಇಂತಹ ನಡೆಗಳ ವಿರುದ್ಧ ಜನ ರೊಚ್ಚಿಗೆ ಏಳುವಂತೆ ಆಗಿದೆ ಎಂದರು. ವೀಡಿಯೋ ಚಿತ್ರಣದಲ್ಲಿ ಶಶಿಕಲಾ ಜೊಲ್ಲೆಯವರು 25 ಲಕ್ಷ ರೂ.ಗಳನ್ನು ಪಡೆಯುವುದು ಸ್ಪಷ್ಟವಾಗಿ ಚಿತ್ರೀಕರಣಗೊಂಡಿದೆ. ಜೊತೆಗೆ ಒಂದು ಕೋಟಿ ರೂ. ಕೊಡಬೇಕು, ಶಾಸಕ ಪರಣ್ಣ ಮುನವಳ್ಳಿ ಗೆ 50 ಲಕ್ಷ ರೂ. ನೀಡಬೇಕು ಎಂದು ಗುತ್ತಿಗೆದಾರನಿಗೆ ಷರತ್ತು ವಿಧಿಸುವ ಅವರ ಮಾತುಗಳನ್ನು ಕೇಳಿದರೆ ಇದುವರೆಗೆ ತಮ್ಮ ಇಲಾಖೆಯಲ್ಲಿ ಏನೆಲ್ಲಾ ಭ್ರಷ್ಟಾಚಾರ ನಡೆದಿರಬಹುದು ಎಂಬುದನ್ನು ಬಿಚ್ಚಿ ಇಡುತ್ತವೆ. ಇಂತಹ ಕೃತ್ಯ ಓರ್ವ ಸಚಿವೆ ಆಗಿ ಮಾಡಿರುವುದು ನಾಚಿಕೆಗೇಡು ಸಂಗತಿ ಎಂದರು. ಮೊದಲೇ ಕೊರೊನಾ ಕಾರಣದಿಂದ ಸಾಕಷ್ಟು ಸಂಕಷ್ಟದಲ್ಲಿ ಜನರಿದ್ದಾರೆ. ಮಹಿಳೆ, ಮಕ್ಕಳ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಬಡ, ಮಧ್ಯಮ ವರ್ಗದ ಕುಟುಂಬದವರು ಅಶಕ್ತರಾಗಿದ್ದಾರೆ. ಪೌಷ್ಠಿಕ ಆಹಾರ ಪೂರೈಸುವುದು ಕನಸಿನಂತೆ ಆಗಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಅವರ ನೆರವಿಗೆ ಬರಬೇಕು. ಪೌಷ್ಠಿಕ ಆಹಾರ ಒದಗಿಸಬೇಕು ಎಂಬುದು ಮೊಟ್ಟೆ ನೀಡುವ ಯೋಜನೆಯ ಮೂಲ ಉದ್ದೇಶ. 

ಆದರೆ, ಸಚಿವರು ತಮ್ಮ ಉದ್ಧಾರಕ್ಕೆ ಇಂತಹ ಉತ್ತಮ ಯೋಜನೆ ಅನುಷ್ಟಾನದಲ್ಲಿ ಹಣ ಮಾಡುವ ನೀಚತನಕ್ಕೆ ಇಳಿದದ್ದು ಈ ಸರ್ಕಾರಕ್ಕೆ ಜನರ ಮೇಲೆ ಇರುವ ಕಾಳಜಿ ಬಗ್ಗೆ ತಿಳಿಸುತ್ತದೆ ಎಂದರು. ಸರಕಾರ ಈ ಇಬ್ಬರಿಂದ ತಕ್ಷಣ ರಾಜಿನಾಮೆ ಪಡೆಯಬೇಕೆಂದು ಆಗ್ರಹಿಸಿದ್ದಾರೆ.


Post a Comment

0 Comments

Ad Code

Responsive Advertisement