Ticker

6/recent/ticker-posts

Ad Code

Responsive Advertisement

'ಮುಂದಿನ ಸಿಎಂ ಕುಮಾರಸ್ವಾಮಿನೇ'- ಎಚ್‌ಡಿ ರೇವಣ್ಣ

 


ಹಾಸನ: ನೋಡ್ರಿ, ಎರಡು ರಾಷ್ಟ್ರೀಯ ಪಕ್ಷಗಳು ಟಾಂಕಾದ್ರೂ ಮಾಡ್ಕೊಳ್ಳಿ, ಪಾಕಾದ್ರೂ ಮಾಡ್ಕೊಳ್ಳಿ ಆದರೆ ಮುಂದಿನ ಸಿಎಂ ಕುಮಾರಸ್ವಾಮಿನೇ, ಇದರಲ್ಲಿ ಬೇರೆ ಮಾತೇ ಇಲ್ಲ ಎಂದು ಮಾಜಿ ಸಚಿವ ಎಚ್‌ಡಿ ರೇವಣ್ಣ ಹೇಳಿದರು.

ಹಾಸನದಲ್ಲಿ ಮಾತನಾಡಿದ ಅವರು, ಎರಡು ರಾಷ್ಟ್ರೀಯ ಪಕ್ಷಗಳು ಸಿಎಂ ಸ್ಥಾನಕ್ಕೆ ಮಾತುಕತೆ ನಡೆಯುವ ಮೂಲಕ ದೊಡ್ಡ ಸುದ್ದಿ ಮಾಡಿಕೊಳ್ಳುತ್ತಿದ್ದಾರೆ. ಆದರೆ, ನಾವು ಈ ರಾಜ್ಯದ ರೈತರ ಸಾಲ ಮನ್ನಾ ಮಾಡಿದ್ದೇವೆ. ಇದನ್ನು ಜನರು ನೆನಪಿನಲ್ಲಿಟ್ಟುಕೊಂಡು ನಮಗೆ ಅಧಿಕಾರ ಕೊಡ್ರಪ್ಪ ಅಂತ ಹೇಳುತ್ತೇವೆ. ನಮ್ಮ ಪಕ್ಷದಲ್ಲಿ ಯಾವುದೇ ಜಗಳ ಇಲ್ಲ. ಎರಡು ರಾಷ್ಟ್ರೀಯ ಪಕ್ಷಗಳು ಜೆಡಿಎಸ್‌ನ್ನು ಮನೆಗೆ ಕಳಿಸುತ್ತೇವೆ ಅಂತ ಹೇಳುತ್ತಾರಲ್ಲ. 2023ರ ನಂತರ ನೋಡಿ ಎಂದು ಭವಿಷ್ಯ ನುಡಿದ ರೇವಣ್ಣ ಮುಂದಿನ ಅಭ್ಯರ್ಥಿ ಅಷ್ಟೇ ಅಲ್ಲ, ಮುಂದಿನ ಸಿಎಂ ಕೂಡ ಕುಮಾರಸ್ವಾಮಿ ಅಂತ ಪರೋಕ್ಷವಾಗಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಟಾಂಗ್ ನೀಡಿದರು.

ಕಳೆದ ನಾಲ್ಕು ತಿಂಗಳಲ್ಲಿ ಅಬಕಾರಿ ಇಲಾಖೆಯಲ್ಲಿ ಎರಡುವರೆ ಸಾವಿರ ಕೋಟಿ ಹಣ ಬಂದಿದೆ. ಸಂಸದ ಮತ್ತು ಶಾಸಕರ ಜೊತೆಗೆ ಗ್ರಾಮ ಪಂಚಾಯಿತಿಗೆ ಬರುವ ಅನುದಾನದ ಹಣವನ್ನು ಸರ್ಕಾರ ತಡೆಹಿಡಿದಿತ್ತು. ಕೋವಿಡ್‌ 19ರ ಹೆಸರನ್ನು ಹೇಳಿ ನರೇಗಾ, ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಹಣವನ್ನು ಕಟ್ ಮಾಡುತ್ತಿದ್ದಾರೆ. ಇದು ರಾಜ್ಯಮಟ್ಟದಲ್ಲಿ ದುಡ್ಡು ಹೊಡೆಯುವ ಕಾರ್ಯಕ್ರಮ ಅಷ್ಟೇ. ನೀವು ಪ್ರಾಮಾಣಿಕವಾಗಿ ಇದ್ದರೆ ಜಿಲ್ಲಾಮಟ್ಟದಲ್ಲಿ ಟೆಂಡರ್ ಕರೆಯಿರಿ. ಅದನ್ನು ಬಿಟ್ಟು ಪಂಚಾಯಿತಿ ಸದಸ್ಯರ ಹಣ ಲೂಟಿ ಮಾಡಲಿಕ್ಕೆ ಹೋಗಬೇಡಿ. ಸರ್ಕಾರ ಲೂಟಿಕೋರರ ಕೈಗೆ ಸಿಲುಕಿದ್ದು, ಅವರೊಂದಿಗೆ ಸೇರಿ ಲೂಟಿ ಹೊಡೆಯೋಕೆ ನಿಂತಿದೆ ಎಂದು ಸರ್ಕಾರದ ವಿರುದ್ದ ಹರಿಹಾಯ್ದರು.


Post a Comment

0 Comments

Ad Code

Responsive Advertisement