ಬಳ್ಳಾರಿ ಏ 25. ಬಳ್ಳಾರಿಯ 30 ನೇ ವಾರ್ಡಿನ ಜನರು ನನ್ನನ್ನು ಅತ್ಯಂತ ಹೆಚ್ಚಿನ ಬಹುಮತದಿಂದ ಗೆಲಿಲ್ಲಸಲಿದ್ದಾರೆಂದು 30 ನೆ ವಾರ್ಡಿನ ಬಿಜೆಪಿ ಅಭ್ಯರ್ಥಿ ವಿ ನಾಗರಾಜ ಅವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನಾನು ಸತತ 20 ವರ್ಷಗಳಿಂದ ಪಕ್ಷದಲ್ಲಿ ನಿಷ್ಠಾವಂತನಾಗಿ ದುಡಿದಿದ್ದೇನೆ, ಆದರೂ ನಾನು ಯಾವತ್ತು ನನಗೆ ಟಿಕೆಟ್ಗೆ ಆಸೆ ಪಟ್ಟವನಲ್ಲ. ಈವತ್ತು ನಾನು ಮಾಡಿರುವ ಸಮಾಜ ಸೇವೆ.ಕೊರೋನ ಸಮಯದಲ್ಲಿ ಮಾಡಿರುವ ಸೇವೆಗಳನ್ನು ಗುರುತಿಸಿ ಬಿಜೆಪಿ ಪಕ್ಷದ ಮುಖಂಡರು ಈಬಾರಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ದಿಸಲು ಅವಕಾಶ ನೀಡಿದ್ದಾರೆ. ಈ ಅವಕಾಶವನ್ನು ನಾನು ದುರ್ಭಳಕೆ ಮಾಡಿಕೊಳ್ಳುವುದಿಲ್ಲ ಎಂದರು. ಈ ಅವಕಾಶವನ್ನು ಜನರಿಗಾಗಿ ಜನರಗೋಸ್ಕರ ಉಪಯೋಗಿಸಿಕೊಳ್ಳುತ್ತೇನೆ ಎಂದರು. ಇಲ್ಲಿನ ಜನರು ಕೂಡ ಅತಿ ಹೆಚ್ಚಿನ ಬಹುಮತದಿಂದ ಗೆಲ್ಲಿಸುವುದಾಗಿ ಭರವಸೆ ನೀಡಿದ್ದಾರೆ ಎಂದರು. ಈಸಂಧರ್ಭದಲ್ಲಿ ಪಕ್ಷದ ಮುಖಂಡರು,ಬಂಡೆಟ್ಟಿ ಮಹೇಶ್, ಶ್ಯಾಮ್,ಭಾರ್ಗವ್,ರಾಮಕ್ರಿಷ್ಣ,ವೆಂಕಟೇಶ್,ಕಾರ್ಯಕರ್ತರು ಇನ್ನಿತರರು ಉಪಸ್ಥಿತರಿದ್ದರು.
ವರದಿ.ಪಂಪನಗೌಡ.ಬಿ.ಬಳ್ಳಾರಿ.9886633682.

0 Comments