Ticker

6/recent/ticker-posts

Ad Code

Responsive Advertisement

ಆರ್ ಎಸ್ ಎಸ್ ನ ನೂತನ ಸರಕಾರ್ಯವಾಹರಾಗಿ ದತ್ತಾತ್ರೇಯ

ಬೆಂಗಳೂರು: ಆರ್ ಎಸ್ ಎಸ್ ನ ಎರಡನೇ ಅತ್ಯುನ್ನತ ಜವಾಬ್ದಾರಿ ಸ್ಥಾನಕ್ಕೆ ದತ್ತಾತ್ರೇಯ ಹೊಸಬಾಳೆಯವರು ಆಯ್ಕೆಯಾಗಿದ್ದಾರೆ. ಬೆಂಗಳೂರಿನ ಹೊರ ವಲಯದಲ್ಲಿರುವ ಚೆನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆಯುತ್ತಿರುವ ಆರ್ ಎಸ್ ಎಸ್ ನ ಅಖಿಲ ಭಾರತೀಯ ಪ್ರತಿನಿಧಿ ಸಭಾ (ಎಬಿಪಿಎಸ್) ದಲ್ಲಿ ದತ್ತಾತ್ರೇಯ ಹೊಸಬಾಳೆಯವರು ಸರಕಾರ್ಯವಾಹ (ಪ್ರಧಾನ ಕಾರ್ಯದರ್ಶಿ) ರಾಗಿ ಆಯ್ಕೆಯಾಗಿದ್ದಾರೆ. 


ಸರಸಂಘಚಾಲಕ್ ಆರ್ ಎಸ್ ಎಸ್ ನ ಅತ್ಯುನ್ನತ ಜವಾಬ್ದಾರಿಯಾಗಿದ್ದು, ಸರಕಾರ್ಯವಾಹ ಎರಡನೇ ಅತ್ಯುನ್ನತ ಹಾಗೂ ಅತಿ ಹೆಚ್ಚು ಜವಾಬ್ದಾರಿಯ ಹುದ್ದೆಯಾಗಿದೆ.  ಮೋಹನ್ ಭಾಗ್ವತ್ ಅವರು ಆರ್ ಎಸ್ ಎಸ್ ನ ಸರಸಂಘಚಾಲಕ್ ಆಗಿ ಸೇವೆ ಸಲ್ಲಿಸುತ್ತಿದ್ದು, 2009 ರಿಂದ ಈ ವರೆಗೂ ಸುರೇಶ್ ಭೈಯ್ಯಾಜಿ ಜೋಷಿಯವರು ಸರಕಾರ್ಯವಾಹರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮಾ.20 ರಂದು ನಡೆದ ಚುನಾವಣೆಯಲ್ಲಿ ದತ್ತಾತ್ರೇಯ ಹೊಸಬಾಳೆಯವರು ಸುರೇಶ್ ಭೈಯ್ಯಾಜಿ ಜೋಷಿ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ.  ಹೋ.ವೇ ಶೇಷಾದ್ರಿ ಅವರ ನಂತರ ಕನ್ನಡಿಗರೊಬ್ಬರಿಗೆ ಮತ್ತೊಮ್ಮೆ ಸರಕಾರ್ಯವಾಹರಾಗಿ ಸೇವೆ ಸಲ್ಲಿಸುವ ಅವಕಾಶ ದೊರೆತಿದೆ.


Post a Comment

0 Comments

Ad Code

Responsive Advertisement