ಬೆಂಗಳೂರು :-ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವುದರಲ್ಲಿ ಸಂಗೀತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಕೋಬಲ್ಟ್ ಸಂಸ್ಥಾಪಕ ಗಣಪತಿ ಹೆಗಡೆ ಹೇಳಿದರು,
ರಾಜರಾಜೇಶ್ವರಿ ನಗರದ ಬೆಮಲ್ ಬಡಾವಣೆ ಯಲ್ಲಿರುವ ಕೋಬಲ್ಟ್ ಸಂಸ್ಥೆಯಲ್ಲಿ ದಿನಪೂರ್ತಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ
ದೇಶ ವಿದೇಶಗಳ ವಿವಿಧ ರೀತಿಯ ವಾದ್ಯ ಸಂಗೀತ ಉಪಕರಣಗಳಿಂದ ಕೂಡಿದ ಕಾರ್ಯಾಗಾರ ಯಶಸ್ವಿಯಾಗಿದ್ದು,ಬೆಳಿಗ್ಗೆ11ಗಂಟೆಯಿಂದಮದ್ಯಾಹ್ನ 2ಗಂಟೆಯ ತನಕ ನಡೆದು ವಾದ್ಯಗಳ ಪರಿಚಯ ವಾಯಿತು ಎಂದರು,
ಹ್ಯಾಂಡಪಾನ್ ಡ್ರಮ್, ವರ್ಕ್ ಶಾಪ್ ,ನಂತರ ಜಾಮಿಂಗ್ ಸೆಷನ್ , ಮತ್ತು ಸಾಯಂಕಾಲ ಫ್ರಾನ್ಸ್ ಮಾರ್ಟೀನ್ ದುಬೋಯ್ಸ್ ಅವರಿಂದ ಹ್ಯಾಂಡಪಾನ್ ವಾದ್ಯ ಹಾಗು ಇಟಲಿ ಜಿ ಎನ್ ಲೂಕ್ ಅವರಿಂದ ಡಿಜೊ ರೀಡು ವಾದ್ಯಗಳ ಕಾರ್ಯಾಗಾರ ನಡೆಯಿತು,
ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡು ಸಂಗೀತ ರಸದೌತಣದ ಸವಿಯುoಡರು,
ಕಾರ್ಯಕ್ರಮದಲ್ಲಿ ಬ್ರಾಂಡನ್ , ಕೃಷ್ಣಶೆಟ್ಟಿ, , ಅಶ್ವಿನಿ ಹೆಗಡೆ, ಚಿರಾಗ್, ಅರ್ಪಿತ್ ಪಾಂಡೆ, ಸರ್ವೋತ್ತಮ ಕಾಮತ್, ಲಲಿತಾ ಹೆಗಡೆ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು,
ಅಶ್ವಿನಿ ಹೆಗಡೆ ಯವರು ಬೆಂಗಳೂರು ಹಾಂಡ್ಸೋನ್ಸ್ ಕ್ಲಬ್ ನ ಸಹಯೋಗದಲ್ಲಿ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.


0 Comments