ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳು ಹಾಗೂ ರಾಜ್ಯಸಭಾ ಸದಸ್ಯ ಶ್ರೀ ಡಿ.ವೀರೇಂದ್ರ ಹೆಗ್ಗಡೆರವರು, ಕರಾಟೆಯಲ್ಲಿ ಎರಡನೇ ಬಾರಿ ವಿಶ್ವ ದಾಖಲೆ ನಿರ್ಮಿಸಿರುವ ಖ್ಯಾತ ಈಜು ತರಬೇತುದಾರ ಅನುಪ್ ಕಾಮತ್ ಅವರಿಗೆ ಪದಕ ಪ್ರದಾನ ಮಾಡಿ ಆಶೀರ್ವದಿಸಿದರು.
ಪ್ರತಿಷ್ಠಿತ ಸಿಂಧ್ಯಾ ಸ್ವಿಮ್ಮಿಂಗ್ ಶಾಲೆಯಲ್ಲಿ ಈಜು ತರಭೇತುದಾರರಾಗಿ ಕಾರ್ಯನಿರ್ವಹಿಸುತ್ತಿರುವ ಅನೂಪ್ ಕಾಮತ್ ರವರು ರಿಯಾಲಿಟಿ ಇಂಟರ್ನ್ಯಾಶನಲ್ ಸ್ಪೋರ್ಟ್ಸ್ ಅಕಾಡೆಮಿ ನಡೆಸಿದ ಸ್ಪರ್ಧೆಯಲ್ಲಿ ಭಾಗವಹಿಸಿ, 90 ಸೆಕೆಂಡ್ಗಳಲ್ಲಿ 251 ಪಂಚ್ಗಳನ್ನು ಹೊಡೆದು ವಿಶ್ವದಾಖಲೆ ನಿರ್ಮಿಸಿದ್ದಾರೆ.

0 Comments