ಕರ್ನಾಟಕ ಸರ್ಕಾರವು ಬೆಳಗಾವಿಯ ಅಧಿವೇಶನದಲ್ಲಿ ‘ಕನ್ನಡ ಬಾಷಾ ಸಮಗ್ರ ಅಭಿವೃದ್ಧಿ ವಿಧೇಯಕ-೨೦೨೨’ ಮಂಡಿಸುವುದಾಗಿ ಹೇಳಿತ್ತು. ರಾಜಕೀಯ ಲಾಭವನ್ನು ಗುರಿಯಾಗಿಸಿ ಕೊಂಡು ಮೀಸಲಾತಿ, ಇತರ ಯೋಜನೆಗಳನ್ನು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು ಕಳೆದ ಅಧಿವೇಶನದಲ್ಲಿ ಮಂಡಿಸಿದ ವಿಧೇಯಕ’ವನ್ನು ಮಂಡಿಸದೆ ಕನ್ನಡದ ಹಿತವನ್ನು ಕಡೆಗಣಿಸಿದ್ದಾರೆ ಎಂದು ಮುಖ್ಯಮಂತ್ರಿ ಚಂದ್ರು ಅವರು ಕನ್ನಡ ಗೆಳೆಯರ ಬಳಗ ಮತ್ತು ಕನ್ನಡ ವಿಕಾಸ ರಂಗ ವ್ಯವಸ್ಥೆ ಮಾಡಿದ್ದ ‘ಕನ್ನಡ ಬಾವುಟ ಹಾರಿಸಿದವರು ನೆನಪಿನ ಮಾಲೆಯ ಅಧ್ಯಕ್ಷ ನುಡಿಯಲ್ಲಿ ತಿಳಿಸಿದರು(ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಹೈಸ್ಕೂಲ್ ವೃತ್ತದಲ್ಲಿರುವ ಬಿ.ಎಂ.ಶ್ರೀ ಪ್ರತಿಮೆಯ ಮುಂಭಾಗ). ಈಗಲೂ ಕಾಲ ಮಿಂಚಿಲ್ಲ. ಸರ್ಕಾರಕ್ಕೆ ನಿಜವಾಗಿ ಕನ್ನಡದ ಬದ್ಧತೆಯಿದ್ದರೆ ಸುಗ್ರಿವಾಜ್ಞೆಯ ಮೂಲಕ ಕನ್ನಡ ಕಾಯದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದರು. ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಹಿತದೃಷ್ಟಿಯಿಂದ ಸ್ಥಳೀಯರಿಗೆ ಆಧ್ಯತೆಯಿರುವ ‘ರಾಷ್ಟ್ರೀಯ ಉದ್ಯೋಗ ನೀತಿ’ ರೂಪಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಕನ್ನಡಕ್ಕೆ ದುಡಿಯುತ್ತಿರುವವರಿಗೆ ಆರೋಗ್ಯ ವಿಮೆ ಮಾಡಿಸಲು ಒತ್ತಾಯ
ಮ. ರಾಮಮೂರ್ತಿಯವರ ಕನ್ನಡ ಹೋರಾಟದ ಬಗ್ಗೆ ಮಾತನಾಡಿದ ರಾ.ನಂ. ಚಂದ್ರಶೇಖರ ಕನ್ನಡಕ್ಕೆ ಪತ್ತೇದಾರಿ ಕಾದಂಬರಿಯ ಪ್ರಾಕರಾವನ್ನು ಪರಿಚಯಿಸಿದ ಮ. ರಾಮಮೂರ್ತಿಯವರು ಪ್ರಸಿದ್ಧ ಸಾಹಿತಿಯಾಗಿದ್ದರು. ಇಂದಿನ ಸ್ವರೂಪದ
ಕನ್ನಡ ಚಳವಳಿಯನ್ನುಆರಂಭಿಸಿದವರು. ಅವರು ಕನ್ನಡಕ್ಕಾಗಿ ತಮ್ಮ ಪ್ರಾಣವನ್ನೇ ಕೊಟ್ಟರು. ಬೆಂಗಳೂರಿನಲ್ಲಿ ಡಿಎಂಕೆ ಬಾವುಟದ ಹಾವಳಿಯನ್ನು ಎದುರಿಸಲು ಹಳದಿ ಕೆಂಪು ಕನ್ನಡ ಬಾವುಟವನ್ನು ರೂಪಿಸಿ, ಕನ್ನಡ ಹೋರಾಟಗಾರರಿಗೆ ಸ್ಫೂರ್ತಿಯನ್ನು ನೀಡಿದರು. ಇಂದು ಅವರ ಪತ್ನಿ ಅನಾಥರಾಗಿದ್ದಾರೆ. ೯೭ರ ಇಳಿವಯಸ್ಸಿನಲ್ಲಿ ಅವರು ಸರ್ಕಾರದ ನೆರವು ಕೋರಿದರೆ ಅದನ್ನು ಕನ್ನಡ ಸಂಸ್ಕೃತಿ ಇಲಾಖೆ ತಿರಸ್ಕರಿಸಿತ್ತು. ಪತ್ರಿಕೆಗಳಲ್ಲಿ ಸುದ್ಧಿಯಾದ ಮೇಲೆ ಎಚ್ಚೆತ್ತ ಸಚಿವ ಸುನಿಲ್ ಕುಮಾರ್ ಅವರು
ಕಮಲಮ್ಮನವರಿಗೆ ನೆರವು ನೀಡುವಂತೆ ಆದೇಶ ಮಾಡಿದ್ದಾರೆ. ಅದಕ್ಕೆ ನಾವು ಅವರನ್ನು ಅಭಿನಂಧಿಸುತ್ತೇವೆ. ಇಂದಿಗೂ ಹಲವು ಕನ್ನಡ ಹೋರಾಟಗಾರರು ತೀರ ಸಂಕಷ್ಟದಲ್ಲಿದ್ದು ಅವರಿಗೆ ತಮಿಳುನಾಡು ಸರ್ಕಾರವು ನಾಡು-ನುಡಿಗೆ ದುಡಿದವರಿಗೆ ಆರೋಗ್ಯ ವಿಮೆ ಮಾಡಿಸುತ್ತಿರುವಂತೆ ಕರ್ನಾಟಕ ಸರ್ಕಾರವೂ ನೆರವಾಗಬೇಕೆಂದು ಕೋರಿದರು.
ಕನ್ನಡ ಪರಿಚಾರಿಕೆಗೆ ಹೊಸ ಆಯಾಮ ನೀಡಿದ ರತ್ನನ ಪದಗಳ ಜಿ.ಪಿ. ರಾಜರತ್ನಂ ಅವರು ಹೇಗೆ ಕನ್ನಡವನ್ನು ಕಟ್ಟಿ ಬೆಳಸಬಹುದು ಎಂಬುದನ್ನು ತೋರಿಸಿ ಕೊಟ್ಟರು ಎಂದು ಪ್ರೊ. ಚಂದ್ರಶೇಖರ ನಾದೂರ ಅವರು ತಿಳಿಸಿ,
ಎ.ಅರ್.ಕೃಷ್ಣಶಾಸ್ತ್ರಿಯವರು ಆರಂಭಿಸಿದ ‘ಸೆಂಟ್ರಲ್ ಕಾಲೇಜು ಕನ್ನಡ ಸಂಘದ ಮೂಲಕ ೫೦ಕ್ಕೂ ಹೆಚ್ಚು ಯುವ ಬರಹಗಾರರ ಕೃತಿಗಳನ್ನು ಪ್ರಕಟಿಸಿ ಪ್ರೋತ್ಸಾಹಿಸಿದರು. ಮನೆ ಮನೆಗೆ ಹೋಗಿ ಕನ್ನಡ ಪುಸ್ತಕಗಳನ್ನು ಮಾರಿ, ಕನ್ನಡ ಸಂಘಗಳಿಗೆ ಹೋಗಿ ಕನ್ನಡ ಜಾಗೃತಿ ಮೂಡಿಸಲು ಶ್ರಮಿಸದರು ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ವ.ಚ. ಚನ್ನೇಗೌಡ ಅವರು ಕನ್ನಡ ಬಾವುಟ ಹಾರಿಸದವರು ಮಾಲಿಕೆಯ ಆಶಯಗಳನ್ನು ತಿಳಿಸಿ, ಕನ್ನಡಕ್ಕೆ ಹೋರಾಡಿದ ಹಿರಿಯ ಚೇತನಗಳ ಕಾರ್ಯ ನಮಗೆ ಸ್ಫೂರ್ತಿಯಾಗುತ್ತವೆ ಎಂದರು.
ಬಾ.ಹ.ಉಪೇಂದ್ರ ವಂದಿಸಿದರು. ಹಲವು ಸಂಘಟನೆಗಳ ಮುಖಂಡರು ಹಾಜರಿದ್ದರು.
0 Comments