Ticker

6/recent/ticker-posts

Ad Code

Responsive Advertisement

ಶುದ್ಧ ಕುಡಿಯುವ ನೀರಿನ ಘಟಕ ಅಲ್ಲ ಇದು ಅಶುದ್ಧ ನೀರಿನ ಘಟಕ

ವಾರ್ತಾ ಜಾಲ ಸುದ್ದಿ : ಮಧುಗಿರಿ :ಪಟ್ಟಣದ 19ವಾರ್ಡ್ ನಲ್ಲಿ ಈ ನಾಲ್ಕು ದಿನಗಳ ಮುಂಚೆ ಶಾಸಕ ಎಂ‌.ವಿ ವೀರಭದ್ರಯ್ಯ ರವರು ಸುಮಾರು ಎಂಟು ಲಕ್ಷ ವೆಚ್ಚದ  ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿದ್ದರು. ಆದರೆ ಕೆಲವೂಬ್ಬರ   ಅಧಿಕಾರಿಗಳ ನಿರ್ಲಕ್ಷತನದಿಂದ ಈ ಶುದ್ಧ ಕುಡಿಯುವ ನೀರಿನ ಹಾಳಾಗಿದ್ದು ಘಟಕವನ್ನು ಸರಿಯಾಗಿ ನೋಡಿಕೊಳ್ಳುವವರು ಕೂಡ ಇಲ್ಲದ ಕಾರಣ ಸುತ್ತಮುತ್ತ ನಿಂತಿರುವ ಕೊಳಚೆ ನೀರು ಸಂಪ್ಪಿಗೆ ಬಂದು ಸೇರಿ ಅದೇ ನೀರು  ಶುದ್ದಿಯಾಗಿ ಬರುತ್ತದೆ. ಈ ನೀರು ಕುಡಿಯಲು ಯೋಗ್ಯವಲ್ಲದ  ಕಾರಣ ಸಾರ್ವಜನಿಕರು ಯಾರು ಕೂಡ ಆ ನೀರನ್ನು ಕುಡಿಯುತ್ತಿಲ್ಲ. ಇದನ್ನು ಮನಗಂಡ ಕನ್ನಡ ಜಾಗೃತಿ ವೇದಿಕೆಯ ಪದಾಧಿಕಾರಿಗಳು ಸ್ಥಳಕ್ಕೆ ಹೋಗಿ ಸ್ವತಹ ತಾವೇ  ಈ ನೀರನ್ನು ಕುಡಿದು ಪರೀಕ್ಷಿಸಿದಾಗ ನೀರು ಅಶುದ್ದಿಯಾಗಿ ಬರುವುದು ಕಂಡುಬಂದಿದೆ.



ನಂತರ ಇದರ ಬಗ್ಗೆ ಮಾತನಾಡಿದ ತಾಲ್ಲೂಕು ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ರಾಘವೇಂದ್ರ ಸುಮಾರು ಎಂಟು ಲಕ್ಷ ವೆಚ್ಚದ ಶುದ್ಧ ನೀರಿನ ಘಟಕ ಇದಾಗಿದ್ದು ಅಶುದ್ಧ ನೀರು ಬರುವುದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದ್ದು ಸರಿಯಾದ ಕಾಮಗಾರಿಕೆ ಮಾಡದೆ ನೆಲಸಮಕ್ಕೆ ನೀರಿನ ಸಂಪು ತೆಗೆದು, ಅದರಲ್ಲಿ ಕಸಕಡ್ಡಿ ಕೊಳಚೆ ನೀರು ಎಲ್ಲ ಹೋಗುವುದಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಅಶುದ್ಧ ನೀರು ಬರುವುದಕ್ಕೆ ಕಾರಣವಾಗಿರುವ ಅಧಿಕಾರಿಗಳು ಹಾಗೂ ಇಂಜಿನಿಯರ್  ರವರ ಮೇಲೆ ಶಾಸಕರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಈ ಮೂಲಕ ಒತ್ತಾಯಿಸಿದರು.

ಈ ವೇಳೆಯಲ್ಲಿ ಕ‌.ಜಾ.ವೇ ಉಪಾಧ್ಯಕ್ಷ ಪ್ರಸಾದ್.ಆಟೋ ಚಾಲಕರ ಘಟಕ. ಅಧ್ಯಕ್ಷ ಹರೀಶ್.ನಗರ ಕಾರ್ಯದರ್ಶಿ ಪ್ರದೀಪ್.ಹಾಗೂ ರಾಜಣ್ಣ.ವಿಜಯಕುಮಾರ್ ಮತ್ತಿತರರಿದ್ದರು.

-ವರದಿ:ನಾಗೇಶ್ ಜೀವಾ ಮಧುಗಿರಿ.

Post a Comment

0 Comments

Ad Code

Responsive Advertisement