ಜುಲೈ 3 ಭಾನುವಾರದ ಶುಭ ಸಂಜೆಯಂದು ನಾಟ್ಯ ನಿನಾದ ಅಕಾಡೆಮಿಯ ನಿರ್ದೇಶಕರಾದಂತಹ
ಶ್ರೀಮತಿ II ಧರಣಿ.ಟಿ. ಕಶ್ಯಪ್ ರವರು ನಯನ ರಂಗಮಂದಿರದಲ್ಲಿ ಏರ್ಪಾಟು ಮಾಡಿದ 'ಊರ್ಮಿಕ ' ನೃತ್ಯೋತ್ಸವವು ಅತ್ಯಂತ ಆಕರ್ಷಣೀಯವಾಗಿ ಮೂಡಿ ಬಂದಿತು. ರಂಗ ಮಂದಿರವು ಜನ ಸಾಗರದಿಂದ ಅಲಂಕೃತವಾಗಿತ್ತು. ನರ್ತಕಿಯ ರಾದಂತಹ ಕು|| ನಿಧಿ, ಕು|| ಶ್ರಾವಣಿ , ಕು||ಸಂವೃತ, ವಿಶೇಷ ಅತಿಥಿಯಾದ ಅಶ್ವಿನಿ ನಂಬಿಯಾರ್ ಹಾಗು ಶ್ರೀಮತಿ || ಸೀತಾ ಗುರುಪ್ರಸಾದ್ ರವರ ಶಿಷ್ಯವೃಂದದವರು ಮಾಡಿದ ನೃತ್ಯ ಜನಮನವನ್ನು ತಲ್ಲಣ ಗೊಳಿಸಿತು. ಗೌರವ ಅತಿಥಿಯಾದ ಶ್ರೀಮತಿ II ಸುಮನಾ ರಂಜಾಳ್ಕರ್ ರವರ ಭಾಷಣವು ನೃತ್ಯದ ಅತ್ಯಮೂಲ್ಯ ವಿವರಣೆಯನ್ನು ಸಾರುತ್ತಿತ್ತು. ನಾಟ್ಯನಿನಾದ ಅಕಾಡೆಮಿಯ ನಿರ್ದೇಶಕರಾದ ಶ್ರೀಮತಿ II ಧರಣಿ.ಟಿ.ಕಶ್ಯಪ್ ರವರು ಶ್ರಿಮತಿ II ಸೀತಾ ಗುರು ಪ್ರಸಾದ್ ರವರಿಗೆ 'ಊರ್ಮಿಕ ' ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದರು. ನಿರೂಪಣೆ, ಭೋಜನ, ಛಾಯಗ್ರಹಣ, ಸಭಾ ಸಮಾರಂಭ ಎಲ್ಲವೂ ಅದ್ಧೂರಿಯಾಗಿ ನೆರವೇರಿತು.
ಒಟ್ಟಾರೆ ಹೇಳುವುದಾದರೆ ಕಾರ್ಯಕ್ರಮವು ಪ್ರಶಂಸನೀಯವಾಗಿಯೂ ಹಾಗೂ ಕಲಾರಸಿಕರ ಮನ ಸೆಳೆಯುವಂತಿತ್ತು.
.jpeg)

.jpeg)


.jpeg)

0 Comments