ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ೨ನೆಯ ಬಾರಿಗೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರು ಆಯ್ಕೆಯಾಗಿದ್ದಾರೆ. ಅವರು ಈ ೬ ವರ್ಷಗಳಲ್ಲಿ ಕರ್ನಾಟಕಕ್ಕೆ ವಿಶೇಷವಾಗಿ ಏನೂ ಮಾಡಿಲ್ಲ. ಇಗಲಾದರೂ ಕನ್ನಡಿಗರು ಯಾವುದೇ ರೀತಿಯ ವಿರೋಧ ವ್ಯಕ್ತ ಪಡಿಸದೆ ರಾಜ್ಯದ ಮಗಳಂತೆ ಕಂಡು ಹರಸಿದ್ದಾರೆ. ಕನ್ನಡಿಗರ ಈ ಪ್ರೀತಿಯನ್ನು ಅರಿತು, ಶಾಸ್ತ್ರೀಯ ಕನ್ನಡಕ್ಕೆ ಸ್ವಾಯತ್ತತೆ ನೀಡಿ ಸೂಕ್ತ ಹಣಕಾಸು ಒದಗಿಸುವುದು, ಕರ್ನಾಟಕದ ರೈಲ್ವೆ ಯೋಜನೆಗಳನ್ನು ಪುರಸ್ಕರಿಸುವ ಮೂಲಕ ಮತ್ತು ಮೇಕೆದಾಟು ಯೋಜನೆಗೆ ತಮಿಳುನಾಡು ಅನಗತ್ಯವಾಗಿ ವಿರೋಧಿಸುತ್ತಿದೆ. ಕುಡಿಯುವ ನೀರಿನ ಯೋಜನೆಗೆ ಅಡ್ಡಿಪಡಿಸುತ್ತಿರುವ ತಮಿಳುನಾಡಿಗೆ ಸೂಕ್ತ ಉತ್ತರ ನೀಡುವ ಮೂಲಕ ನಿರ್ಮಲಾ ಸೀತಾರಾಮನ್ ಅವರು ಕನ್ನಡಿಗರ ಋಣ ತೀರಿಸಲಿ ಎಂದು ಕನ್ನಡ ಗೆಳೆಯರ ಬಳಗವು ಒತ್ತಾಯಿಸುತ್ತದೆ
0 Comments