ಬಳ್ಳಾರಿ ಮೇ 11. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕು ಚಾನಾಳ್ ಗ್ರಾಮದಿಂದ ಕೆಲಸ ಮುಗಿಸಿಕೊಂಡು ತೆಕ್ಕಲಕೋಟೆಗೆ ಬರುವ ದಾರಿಯಲ್ಲಿ ಆಟೋ ಪಲ್ಟಿಯಾಗಿ 13ಜನರಿಗೆ ಗಾಯವಾಗಿದ್ದು ಒಬ್ಬ ವ್ಯಕ್ತಿ ಮರಣ ಹೊಂದಿದ್ದಾರೆ. ಮರಣ ಹೊಂದಿದ ವ್ಯಕ್ತಿ ( ಈರಪ್ಪ ವಯಸ್ಸು 50) ಎಂದು ಗುತಿಸಲಾಗಿದೆ.
ಗಾಯಾಳುಗಳನ್ನು ಚಿಕಿತ್ಸೆಗಾಗಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಷಯ ತಿಳಿದ ತಕ್ಷಣ ಬಿಜೆಪಿ ತಾಲೂಕ ಯುವಮೋರ್ಚ ಅಧ್ಯಕ್ಷ, ಶಾಸಕ ಸೋಮಲಿಂಗಪ್ಪನವರ ಪುತ್ರ, ಜನಪ್ರಿಯ ಯುವನಾಯಕರಾದ ಸಿದ್ದಪ್ಪನವರು ವಿಮ್ಸ್ ಆಸ್ಪತ್ರೆಗೆ (OPD) ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿ ಸಂಬಂಧ ಪಟ್ಟ ಆರೋಗ್ಯ ಆಧಿಕಾರಿಗಳ ಹತ್ತಿರ ಮಾತನಾಡಿ ಗಾಯಾಳೂಗಳಿಗೆ ಉತ್ತಮ ಚಿಕಿತ್ಸೆ ನೀಡುವಂತೆ ಮನವಿ ಮಾಡಲಾಯಿತು.

0 Comments