Ticker

6/recent/ticker-posts

Ad Code

Responsive Advertisement

ಕರ್ನಾಟಕ ಸಂಘ, ಕತಾರ್ ಅಧ್ಯಕ್ಷರಾಗಿ ಮಹೇಶ್ ಗೌಡ ಅವಿರೋಧ ಆಯ್ಕೆ

ಕರ್ನಾಟಕ ಸಂಘ ಕತಾರ್ (ಭಾರತೀಯ ರಾಯಭಾರ ಕಚೇರಿಯ ಅಡಿಯಲ್ಲಿನ ಭಾರತೀಯ ಸಾಂಸ್ಕ್ರತಿಕ ಕೇಂದ್ರದ ಅಂಗಸಂಸ್ಥೆ) ಒಂದು ಸಾಮಾಜಿಕ ಸಾಂಸ್ಕ್ರತಿಕ ಸಂಸ್ಥೆ, ಕತಾರ್ ದೇಶದಲ್ಲಿ ೧೯೯೯ ರಿಂದ ಕನ್ನಡ ಸಂಸ್ಕ್ರತಿ, ಹಾಗು ಭಾಷೆಯನ್ನು ಉಳಿಸುವ,  ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತು ಬಂದಿದೆ.

ಕರ್ನಾಟಕ ಸಂಘ, ಕತಾರ್, ೨೦೨೨-೨೩ ಸಾಲಿನ ಅಧ್ಯಕ್ಷರಾಗಿ ಮಹೇಶ್ ಗೌಡ ಅವಿರೋಧವಾಗಿ ಆಯ್ಕೆ.




ದೋಹಾ: ಕರ್ನಾಟಕ ಸಂಘ ಕತಾರ್ (ಭಾರತೀಯ ರಾಯಭಾರ ಕಚೇರಿಯ ಅಡಿಯಲ್ಲಿನ ಭಾರತೀಯ ಸಾಂಸ್ಕ್ರತಿಕ ಕೇಂದ್ರದ ಅಂಗಸಂಸ್ಥೆ) ಒಂದು ಸಾಮಾಜಿಕ ಸಾಂಸ್ಕ್ರತಿಕ ಸಂಸ್ಥೆ, ಕತಾರ್ ದೇಶದಲ್ಲಿ ೧೯೯೯ ರಿಂದ ಕನ್ನಡ ಸಂಸ್ಕ್ರತಿ, ಹಾಗು ಭಾಷೆಯನ್ನು ಉಳಿಸುವ,  ಬೆಳೆಸುವ ಮಹತ್ತರ ಜವಾಬ್ದಾರಿಯನ್ನು ಹೊತ್ತು ಬಂದಿದೆ ಹಾಗು ಸಂಕಷ್ಟದಲ್ಲಿರುವ ಜನರಿಗೆ ಮತ್ತು ಕತಾರ್‌ನಲ್ಲಿ ವಾಸಿಸುತ್ತಿರುವ ಕರ್ನಾಟಕದ ಜನರಿಗೆ ಸಹಾಯ ಹಸ್ತ ಚಾಚುವಲ್ಲಿ ಸಂಘ ಮುಂಚೂಣಿಯಲ್ಲಿದೆ.
 
ಸಂಘವು ೨೦೨೨-೨೦೨೩ ನೇ ಸಾಲಿಗೆ ತನ್ನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಿತು. ೨೦೨೨ ರ ಏಪ್ರಿಲ್ ೯ ರಂದು ಸಂಜೆ ೦೭.೩೦ ಕ್ಕೆ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ ನಡೆದ ವಾರ್ಷಿಕ ಸಭೆಯಲ್ಲಿ ಹೆಚ್ಚಿನ ಸದಸ್ಯರ ಉಪಸ್ಥಿತಿಯಲ್ಲಿ ಕರ್ನಾಟಕ ಸಂಘ ಕತಾರ್‌ನ ೧೩ ನೇ ಅಧ್ಯಕ್ಷರಾಗಿ ಶ್ರೀ ಮಹೇಶ್ ಗೌಡ ಅವರನ್ನು ಆಯ್ಕೆ ಮಾಡಲಾಯಿತು.  ಶ್ರೀ. ಮಹೇಶ್ ಗೌಡ ಅವರು ಮೂಲತಃ ಕರ್ನಾಟಕದ ಬೆಂಗಳೂರಿನವರು, ಅವರು ಕತಾರ್‌ನಲ್ಲಿರುವ ಭಾರತೀಯ ಸಮುದಾಯದ ಅತ್ಯಂತ ಸಕ್ರಿಯ ಸದಸ್ಯರಲ್ಲಿ ಒಬ್ಬರು, ವಿವಿಧ ಸಂಘಗಳ ಅಡಿಯಲ್ಲಿ ಕೆಲಸ ಮಾಡಿರುವ ಇವರು ಸಮುದಾಯ ಸೇವೆಯಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ, ಶ್ರೀ ಮಹೇಶ್ ಗೌಡ ಅವರು ಭಾರತೀಯ ಸಮುದಾಯದ ಬೆನೊವಾಲೆಟ್ ಫ್ಯೂರೋಮ್ ನಿಕಟಪೂರ್ವ ಉಪಾಧ್ಯಕ್ಷರಾಗಿದ್ದರು. ಕರ್ನಾಟಕ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳಾಗಿ ಸಹ ಸೇವೆ ಸಲ್ಲಿಸಿದ್ದಾರೆ.
೨೦೨೨-೨೦೨೩ನೆ ಸಾಲಿನ ಸಮಿತಿಗೆ ಆಯ್ಕೆಯಾದ ಇತರ ಸದಸ್ಯರು:
1. ಶ್ರೀ ಸಂದೀಪ್ ಡಿ ಎಸ್ -ಉಪಾಧ್ಯಕ್ಷರು
2. ಶ್ರೀ ಪ್ರದೀಪ್ ಕುಮಾರ್ ದಿಲೀಪ್- ಪ್ರಧಾನ ಕಾರ್ಯದರ್ಶಿ
3. ಶ್ರೀ ರಮೇಶ ಕೆ.ಎಸ್-ಖಜಾಂಚಿ
4. ಶ್ರೀಮತಿ ಸುಶೀಲಾ ಸುನಿಲ್ -ಸಾಂಸ್ಕೃತಿಕ ಕಾರ್ಯದರ್ಶಿ
5. ಶ್ರೀ ಮಂಜೋತ್ ಸುರೇಶ್- ಜಂಟಿ ಸಾಂಸ್ಕೃತಿಕ ಕಾರ್ಯದರ್ಶಿ
6. ಶ್ರೀ ಸೇವಿಯಸ್ ಎಸ್ ಕ್ರಾಸ್ತಾ-ಸದಸ್ಯತ್ವ ಮತ್ತು ಮಾಧ್ಯಮ ಸಂಯೋಜಕರು
7. ಶ್ರೀ ನಿಲೀಶ ರಣದೇವಿ - ಕನ್ನಡ, ಪರಿಸರ ಮತ್ತು ಹಿತಚಿಂತಕ ಚಟುವಟಿಕೆಗಳು
8. ಶ್ರೀ ಮೋಹನ್ ರಾವ್ - ಸಂಘಟನೆ ಮತ್ತು ಲಾಜಿಸ್ಟಿಕ್ಸ್ ಸಂಯೋಜಕರು
9. ಶ್ರೀ ಜಖೀರ್ ಅಹ್ಮದ್ - ಕ್ರೀಡಾ ಸಂಯೋಜಕರು
10. ಶ್ರೀಮತಿ ಸಂಜನಾ ಜೀವನ್ - ಮಹಿಳೆಯರು ಮತ್ತು ಮಕ್ಕಳ ಚಟುವಟಿಕೆಗಳ ಸಂಯೋಜಕರು.
ನಿಕಟಪೂರ್ವ ಅಧ್ಯಕ್ಷರಾದ ಡಾ.ಸಂಜಯ ಕುದ್ರಿಯವರು ಕಳೆದ ಸಮಿತಿಯ ಅಧಿಕಾರಾವಧಿಯಲ್ಲಿ ನೀಡಿದ ಬೆಂಬಲಕ್ಕಾಗಿ ಸಂಘದ ಎಲ್ಲಾ ಸದಸ್ಯರಿಗೆ, ಪದಾಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಶ್ರೀ ಮಹೇಶ್ ಗೌಡ ನೇತೃತ್ವದ ಹೊಸ ಸಮಿತಿಗೆ ತಮ್ಮ ಬೆಂಬಲವನ್ನು ಸೂಚಿಸಿದರು.
ಹೊರಹೋಗುವ ಸಮಿತಿಯನ್ನು ಶ್ಲಾಘಿಸಿದ ಮಹೇಶ್ ಗೌಡ ಅವರು ಕೋವಿಡ್ ಸಮಯದಲ್ಲಿ ಕನ್ನಡಿಗರಿಗೆ ಸಹಾಯ ಮಾಡುವಲ್ಲಿ ಪೂರ್ವ ಸಮಿತಿಯು ನೀಡಿದ ಕೊಡುಗೆಯನ್ನು ಶ್ಲಾಘಿಸಿದರು. "ನಮ್ಮ ಸಂಘಕ್ಕೆ ಹೊಸ ಸದಸ್ಯರನ್ನು ನೊಂದಾಯಿಸುವ ಕೆಲಸ ಮತ್ತು ಇನ್ನೂ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಅಗತ್ಯವಿದೆ" ಎಂದು ತಮ್ಮ ಮುಂಬರುವ ಕೆಲಸಗಳ ರೂಪು ರೇಷೆಯನ್ನು ಕಿರಿದಾಗಿ ಪರಿಚಯಿಸಿದರು.
ಈ ವಾರ್ಷಿಕ ಮಹಾಸಭೆಯಲ್ಲಿ ಪ್ರಸ್ತುತ ಸಮುದಾಯದ ಮುಖಂಡರಾದ ಐಸಿಸಿ ಉಪಾಧ್ಯಕ್ಷರು ಶ್ರೀ ಸುಬ್ರಮಣ್ಯ ಹೆಬ್ಬಾಗಿಲು,  ಕೆಎಸ್‌ಕ್ಯೂ ಮಾಜಿ ಅಧ್ಯಕ್ಷರು ಮತ್ತು ಸಲಹಾ ಮಂಡಳಿ ಸದಸ್ಯರು ಶ್ರೀ ವಿ ಎಸ್ ಮನ್ನಂಗಿ, ಕೆಎಸ್‌ಕ್ಯೂ ಮಾಜಿ ಅಧ್ಯಕ್ಷರು ಮತ್ತು ಸಲಹಾ ಮಂಡಳಿ ಸದಸ್ಯರು ಶ್ರೀ ದೀಪಕ್ ಶೆಟ್ಟಿ, ಕೆಎಸ್‌ಕ್ಯೂ ಮಾಜಿ ಉಪಾಧ್ಯಕ್ಷರು ಶ್ರೀ ರವಿಶೆಟ್ಟಿ, ಐ ಎಸ್ ಸಿ ಸಮಿತಿ ಸದಸ್ಯರು ಶ್ರೀ ಅನಿಲ್ ಬೋಳೂರು, ಐ ಸಿ ಬಿ ಫ್ ಸಮಿತಿ ಸದಸ್ಯರು ಶ್ರೀ ದಿನೇಶ್ ಗೌಡ, ತುಳು ಕೂಟದ ಅಧ್ಯಕ್ಷರು ಶ್ರೀ ಕಿರಣ್ ಆನಂದ್, ಉತ್ತರ ಕರ್ನಾಟಕ ಬಳಗದ ಅಧ್ಯಕ್ಷರು ಶ್ರೀ ಶಶಿಧರ್ ಹೆಬ್ಬಾಳ, ಎಸ್ ಕೆ ಮ್ ಡಬ್ಲ್ಯೂ ಮಾಜಿ ಅಧ್ಯಕ್ಷರು ಶ್ರೀ ಅಬ್ದುಲ್ಲಾ ಮೋನು, ಬಿಲವ ಕತಾರ್ ಉಪಾಧ್ಯಕ್ಷರು ಶ್ರೀ ಅಮಿತ್ ಪೂಜಾರಿ, ಐಸಿಸಿ ಸಮಿತಿ ಮಾಜಿ ಸದಸ್ಯರಾದ ಶ್ರೀ ರಾಮಚಂದ್ರ ಶೆಟ್ಟಿ ಮತ್ತು ಇತರ ಅನೇಕ ಮುಖಂಡರು ಮತ್ತು ಸಮುದಾಯದ ಹಾಗೂ ಕರ್ನಾಟಕ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಶ್ರೀ ಪಿ ಎನ್ ಬಾಬುರಾಜನ್, ಅಧ್ಯಕ್ಷರು ಭಾರತೀಯ ಸಾಂಸ್ಕೃತಿಕ ಕೇಂದ್ರ -
“ಕರ್ನಾಟಕ ಸಂಘಕ್ಕೇ ಶ್ರೀ ಮಹೇಶ್ ಗೌಡರಂತಹ ಸಕ್ರಿಯ ವ್ಯಕ್ತಿ ಅಧ್ಯಕ್ಷರಾಗುವುದು ಆಜಾದಿ ಕಾ ಅಮೃತ್ ಮಹೋತ್ಸವದ ವರ್ಷದಲ್ಲಿ ಭಾರತೀಯ ಸಾಂಸ್ಕೃತಿಕ ಕೇಂದ್ರ ಮತ್ತು ಭಾರತೀಯ ಸಮುದಾಯಕ್ಕೆ ಹೆಚ್ಚು ಬಲ ಸಿಕ್ಕಂತೆ " ಎಂಬ ಅಭಿಪ್ರಾಯವನ್ನು ವ್ಯಕ್ತ ಪಡಿಸಿದ್ದಾರೆ.



Post a Comment

0 Comments

Ad Code

Responsive Advertisement