ಬೆಂಗಳೂರು : ನಮ್ಮ ಭಾರತ ದೇಶದಲ್ಲಿ ಆಚರಿಸಲಾಗುತ್ತಿರುವ 75 ನೇ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಈ ಸಂದರ್ಭದಲ್ಲಿ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಕಾರ್ಮಿಕ ಭವಿಷ್ಯ ನಿಧಿ ಸಂಘಟನೆಯು ಮೊದಲ ಹಂತವಾಗಿ ದೇಶದಾದ್ಯಂತ 5 ಪ್ರಮುಖ ಮೆಟ್ರೋ ನಗರಗಳಲ್ಲಿ ಮಹಿಳಾ ಸಹಾಯ ಕೇಂದ್ರಗಳನ್ನು ಆರಂಭಿಸಿದ್ದು, ವಿರ್ಚುವಲ್ ಮೂಲಕ ಕೇಂದ್ರ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವರಾದ ಭೂಪೇಂದ್ರ ಯಾದವ್ ರವರು ಇವುಗಳ ಉದ್ಘಾಟನೆಯನ್ನು ನೆರವೇರಿಸಿದರು.
EPS-95 ಬೆಮಸಾ ಮತ್ತು ಕರಾಸಾ ನಿವೃತ್ತ ನೌಕರರ ಸಂಘ (ರಿ) ಕಾರ್ಯಾಧ್ಯಕ್ಷ ನಂಜುಂಡೇಗೌಡ ನೇತೃತ್ವದಲ್ಲಿ ನಿವೃತ್ತ ಪಿಂಚಣಿದಾರರಿಗೆ ಕನಿಷ್ಠ ಪಿಂಚಣಿ ರೂ. 7,500 + ತುಟಿ ಭತ್ಯ ಹಾಗೂ ವೈದ್ಯಕೀಯ ಸೌಲಭ್ಯವನ್ನು ನಿಗದಿಪಡಿಸುವ ಕುರಿತು ಇದೇ ತಿಂಗಳು ಹನ್ನೊಂದು ರಂದು ಗುವಾಹಟಿಯಲ್ಲಿ ನಡೆಯಲಿರುವ ಸಿ.ಬಿ.ಟಿ. ಸಭೆಯಲ್ಲಿ ಅಂಗೀಕಾರವನ್ನು ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ -ಗೋವಾ ಮತ್ತು ಬೆಂಗಳೂರು ವಲಯದ ಅಪರ ಕೇಂದ್ರೀಯ ಪಿಎಫ್ ಆಯುಕ್ತರಾದ ಮಾರುತಿ ಭೋಯಿ ರವರಿಗೆ ನಗರದ ರಿಚ್ಮಂಡ್ ವೃತ್ತದ ಬಳಿಯಿರುವ ಕಾರ್ಮಿಕರ ಭವಿಷ್ಯನಿಧಿ ಕಚೇರಿಯ ಆವರಣದಲ್ಲಿ ನೂರಾರು ನಿವೃತ್ತ ನೌಕರರ ಸಮಕ್ಷಮದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
0 Comments