Ticker

6/recent/ticker-posts

Ad Code

Responsive Advertisement

ಮಲ್ಲೇಶ್ವರದಲ್ಲಿ ಮೊಳಗಿದ ಕಾಂಗ್ರೆಸ್ ನ ಮೇಕೆದಾಟು ಪಾದಯಾತ್ರೆ ಅಬ್ಬರ...!

ಮೇಕೆದಾಟು - 2.0 ಪಾದಯಾತ್ರೆ ನಿರೀಕ್ಷೆಯಂತೆಯೇ ಪ್ರಾರಂಭದಿ0ದಲೂ ಸದ್ದು ಮಾಡುತ್ತಿದ್ದು, ಇಂದು ಮಲ್ಲೇಶ್ವರದಲ್ಲಿ ಪ್ರತಿಧ್ವನಿಸಿತು.

















ಕಾಂಗ್ರೆಸ್ ನ ಈ ಪಾದಯಾತ್ರೆಗೆ ಬೆಂಗಳೂರು ನಗರದಲ್ಲಿ 3ನೇ ದಿನವಾದ ಇಂದು ಗುರುವಾರ ಭರ್ಜರಿ ಯಶಸ್ಸು ಸಿಕ್ಕಿರುವುದು ಕಂಡಿದೆ. ಮಲ್ಲೇಶ್ವರ ಮುಖಾಂತರ ಹಾದು ಹೋದ ಈ ಯಾತ್ರೆ ಇಂದು ಬಸವನಗುಡಿ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಮಾರೋಪ ನಡೆಯಲಿದೆ. 

ಬೆಂಗಳೂರಿಗರಿಗೆ ನಮ್ಮ ನೀರು; ನಮ್ಮ ಹಕ್ಕು... ಎಂಬ ಧ್ಯೇಯದೊಂದಿಗೆ ನಡೆಸುತ್ತಿರುವ ಹಕ್ಕೊತ್ತಾಯ ಪಾದಯಾತ್ರೆಯು ಮಲ್ಲೇಶ್ವರ ಸಂಪಿಗೆ ರಸ್ತೆ ಮುಖಾಂತರ ಚಾಮರಾಜಪೇಟೆಗೆ ತೆರಳಿ, ಆನಂತರ ಬಸವನಗುಡಿಯ ನ್ಯಾಷನಲ್ ಕಾಲೇಜ್ ನತ್ತ ತೆರಳಲಿದೆ. 

ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿ ಸಾಗಿದ ಪಾದಯಾತ್ರೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕೆಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಂಸದ ನಾರಾಯಣಸ್ವಾಮಿ, ಮಾಜಿ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ, ಕಾಂಗ್ರೆಸ್ ನ ಹಿರಿಯ ನಾಯಕರುಗಳಾದ ಬಿ.ಕೆ. ಹರಿಪ್ರಸಾದ್, ಈಶ್ವರ ಖಂಡ್ರೆ, ಲಕ್ಷಿö್ಮನಾರಾಯಣ, ಕೃಷ್ಣ ಭೈರೇಗೌಡ, ರಮಾನಾಥ ರೈ, ಯು.ಟಿ. ಖಾದರ್, ಎಂ.ಬಿ.ಪಾಟೀಲ್, ಪ್ರಿಯಾಂಕ ಖರ್ಗೆ, ಮಾಜಿ ಮೇಯರ್ ರಾಮಚಂದ್ರಪ್ಪ, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾರಾಮಯ್ಯ, ಕೆ.ಪಿ.ಸಿ.ಸಿ ವೈದ್ಯಕೀಯ ಘಟಕದ ಪ್ರಧಾನ ಕಾರ್ಯದರ್ಶಿ, ಡಾ. ಶಂಕರ ಗುಹಾ ದ್ವಾರಕಾನಾಥ್ ಬೆಳ್ಳೂರು, ಯುವ ನಾಯಕ ಬಾಲಾಜಿ ತಿಮ್ಲಾಪುರ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರದ ಹಿರಿಯ ನಾಯಕ ಅನೂಪ್ ಅಯ್ಯಂಗಾರ್, ಕೆ.ಸಿ. ಅಶೋಕ್, ಕೆ.ಪಿ.ಸಿ.ಸಿ. ಮಾಧ್ಯಮ ವಕ್ತಾರ ಬಿ.ಎಂ. ಪಾಟೀಲ್, ಯುವ ನಾಯಕ ರಕ್ಷಿತ್ ಶಿವರಾಂ, ಮಲ್ಲೇಶ್ವರ ಕಾಂಗ್ರೆಸ್ ಮುಖಂಡರಾದ ಗಿರೀಶ್ ಲಕ್ಕಣ್ಣ, ಬೆಂಗಳೂರು ಉತ್ತರ ಕಾರ್ಮಿಕ ವಿಭಾಗದ ಉಪಾಧ್ಯಕ್ಷರಾದ ಶ್ರೀಮತಿ ಮೈನಾ ದಿಲೀಪ್, ರಾಜರಾಜೇಶ್ವರಿ ನಗರದ ರಾಜ್‌ಕುಮಾರ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಅರಮನೆ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ಎಂ., ವಾರ್ಡ್ ಅಧ್ಯಕ್ಷ ಕೆ. ರವಿಚಂದ್ರ, ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಮುಖಂಡ ಹನುಮಂತೇಗೌಡ, ಕುವೆಂಪು ನಗರ ಬ್ಲಾಕ್ ಕಾಂಗ್ರೆಸ್ ಕಮಿಟಿ (ಬ್ಯಾಟರಾಯನಪುರ) ಉಪಾಧ್ಯಕ್ಷ ಎಲ್.ವೀರಣ್ಣ ಮುಂತಾದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.





ನಮ್ಮ ನೀರು, ನಮ್ಮ ಹಕ್ಕು ಘೋಷ ವಾಕ್ಯದೊಂದಿಗೆ ಆರಂಭವಾದ ಮೇಕೆದಾಟು 2 ಪಾದಯಾತ್ರೆಗೆ ಸಾರ್ವಜನಿಕರು ಎಲ್ಲೆಡೆ ಸ್ಪಂದಿಸುತ್ತಿದ್ದುದು ಕಂಡು ಬಂದಿತು. ಇದೇ ಸಂದರ್ಭದಲ್ಲಿ ಮಲ್ಲೇಶ್ವರದ ಯುವ ನಾಯಕ ಅನೂಪ್ ಅಯ್ಯಂಗಾರ್ ಅವರ ಮುಂದಾಳತ್ವದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸುಮಾರು 20 ಅಡಿಗಳ ಸೇಬಿನ ಹಾರವೊಂದನ್ನು ಕಾಡು ಮಲ್ಲೇಶ್ವರದ ದೇವಾಲಯದ ಬಳಿ ಹಾಕಿ ಸ್ವಾಗತ ಕೋರಲಾಯಿತು. ಸಂಜೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಈ ಹೋರಾಟಕ್ಕೆ ಹೊಸ ಯೋಜನೆ ಹಾಗೂ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಗಳು ಕಾಣುತ್ತಿವೆ...



ನಿನ್ನೆಯಷ್ಟೇ ಮಲ್ಲೇಶ್ವರದ ಮಲ್ಲಿಕಾರ್ಜುನಸ್ವಾಮಿ  ದೇವಾಲಯದ ರಥೋತ್ಸವ ಸಂದರ್ಭದಲ್ಲಿ ಸಂಪಿಗೆ ರಸ್ತೆಯ  ಸಂಚಾರ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು. ಅಂತೆಯೇ, ಇಂದೂ ಸಹ ಕಾಂಗ್ರೆಸ್ ನ ಪಾದಯಾತ್ರೆಯಿಂದಾಗಿ ವಾಹನ ಸಂಚಾರಕ್ಕೆ ಆದ ಅಡಚಣೆಯಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು. ಸಾರ್ವಜನಿಕರು ಬೇರೆ ಮಾರ್ಗದಲ್ಲಿ ಸಂಚರಿಸಲು ಹಪಹಪಿಸುತ್ತಿದ್ದುದು ಕಂಡು ಬಂದಿತ್ತು.

Post a Comment

0 Comments

Ad Code

Responsive Advertisement